ಬೆಂಗಳೂರು : ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ನಿಂದ ಹಲವು ನಟರನ್ನು ಕರೆತರಲಾಗಿತ್ತು. ಇದೀಗ ನಟ ಶಿವರಾಜ್ ಕುಮಾರ್ ಅವರು ಅಭಿನಯಿಸುತ್ತಿರುವ ರುಸ್ತುಂ ಚಿತ್ರಕ್ಕೂ ಕೂಡ ಬಾಲಿವುಡ್ ನಟರೊಬ್ಬರನ್ನ ಕರೆತರಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಹೌದು. ರುಸ್ತುಂ ಚಿತ್ರದಲ್ಲಿ ನಟಿಸಲು ಬಾಲಿವುಡ್ ನಟ ವಿವೇಕ್ ಓಬೇರಾಯ್ ಅವರನ್ನ ಕರೆತರುವ ನಿರ್ಧಾರವನ್ನು ಚಿತ್ರದ ನಿರ್ದೇಶಕ ರವಿವರ್ಮ ಅವರು ಮಾಡಿದ್ದಾರೆ. ಹಾಗೇ ಈ ಚಿತ್ರದಲ್ಲಿ ನಟಿಸಲು ವಿವೇಕ್ ಓಬೇರಾಯ್ ಅವರು ಓಕೆ ಅಂದಿದ್ದಾರೆ.