ಮುಂಬೈ: ಇಂದು ಇಹಲೋಕ ತ್ಯಜಿಸಿರುವ ಭಾರತ ರತ್ನ ಲತಾ ಮಂಗೇಶ್ಕರ್ ಸಾವು ನಿಜಕ್ಕೂ ದೇಶಕ್ಕೆ ಬಹುದೊಡ್ಡ ನಷ್ಟ. ಲತಾ ಹಾಡುಗಳೆಂದರೆ ನಮ್ಮ ಹೆಮ್ಮೆಯ ಸೈನಿಕರಿಗೂ ಸ್ಪೂರ್ತಿಯಾಗುತ್ತಿತ್ತು. ಅವರ ಮಧುರ ಕಂಠದ ಹಾಡುಗಳನ್ನು ಇಷ್ಟಪಡದವರೇ ಇರಲಿಲ್ಲ.