ನವದೆಹಲಿ: ವಿರಾಟ್ ಕೊಹ್ಲಿ ತಾಂತ್ರಿಕವಾಗಿ ಉತ್ತಮ ನಾಯಕರಲ್ಲ. ಅವರ ನಾಯಕತ್ವದಲ್ಲಿ ಇದುವರೆಗೆ ಆರ್ ಸಿಬಿ ಒಂದೇ ಒಂದು ಐಪಿಎಲ್ ಗೆದ್ದಿಲ್ಲ. ಅವರನ್ನು ಇಷ್ಟು ದಿನ ನಾಯಕರಾಗಿ ಇಟ್ಟುಕೊಂಡಿದ್ದಕ್ಕೆ ಅವರು ಆರ್ ಸಿಬಿ ಮ್ಯಾನೇಜ್ ಮೆಂಟ್ ಗೆ ಋಣಿಯಾಗಿರಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೀಡಿದ ಹೇಳಿಕೆ ಈಗ ಅವರಿಗೇ ಮುಳುವಾಗಿದೆ.