ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜನರು ಕೊಟ್ಟಂತ ತೀರ್ಪನ್ನು ಗೌರವಿಸುತ್ತೇನೆ. ಈ ಚುನಾವಣೆಯಲ್ಲಿ ಜನರು ಕೊಟ್ಟಿರುವ ತೀರ್ಪು ರಾಜ್ಯಕ್ಕೆ ಸಂಬಂಧಿಸಿಲ್ಲ. ಜನರು ನಮಗೆ ಐದುವರ್ಷಗಳವರೆಗೆ ಅಧಿಕಾರ ಮಾಡಲು ತೀರ್ಪುನೀಡಿದ್ದಾರೆ. ಲೋಕಸಭೆ ಚುನಾವಣೆ ರಾಷ್ಟ್ರೀಯ ವಿಷಯಗಳ ಮೇಲೆ ನಡೆದ ಚುನಾವಣೆ. ಆದ್ದರಿಂದ ರಾಜ್ಯದ ಸಾಧನೆಗೆ ಈ ತೀರ್ಪು ಸಂಬಂಧಿಸಿಲ್ಲ ಮತ್ತು ನಮ್ಮ ಒಂದು ವರ್ಷದ ಸಾಧನೆಯ ಅಳತೆಗೋಲಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ 28 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗೆದ್ದಿದ್ದೇವೆ.