ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ದೇಶಕ ಪ್ರೇಮ್ ಬಗ್ಗೆ ನೀಡಿದ ಹೇಳಿಕೆಯಿಂದಾಗಿ ಎರಡೂ ಕುಟುಂಬಗಳ ನಡುವೆ ಅಸಮಾಧಾನ ಮೂಡಿತ್ತು. ಆದರೆ ಈಗೆಲ್ಲವೂ ಮರೆಯಾಗಿದೆ ಎಂದು ರಕ್ಷಿತಾ ಸಾರಿದ್ದಾರೆ.ರಕ್ಷಿತಾ ಮತ್ತು ದರ್ಶನ್ ಪರಮಾಪ್ತ ಮಿತ್ರರು. ಆದರೆ ಪ್ರೇಮ್ ಬಗ್ಗೆ ದರ್ಶನ್ ನೀಡಿದ ಹೇಳಿಕೆಯಿಂದ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗಿತ್ತು. ಈ ಸಂದರ್ಭದಲ್ಲಿ ಹಲವರು ನೀವು ಯಾರ ಪರ ನಿಲ್ಲುತ್ತೀರಿ ಎಂದು ರಕ್ಷಿತಾರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರನ್ನೂ ಬಿಟ್ಟುಕೊಡಲಾರೆ