ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕೊನೆಗೂ ಆದಿತ್ಯಾ ಆಳ್ವಾರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಷ್ಟು ದಿನ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ ಆದಿತ್ಯ ಈಗ ಬಂಧನವಾಗಲು ಅವರ ಅಡುಗೆ ಭಟ್ಟರೇ ಕಾರಣವಾಗಿದ್ದು ವಿಶೇಷ.ಸಿಸಿಬಿ ಪೊಲೀಸರು ಆದಿತ್ಯಾ ಆಳ್ವಾರ ಆಪ್ತರ ಮೇಲೆ ಕೆಲವು ದಿನಗಳಿಂದ ನಿಗಾ ಇಟ್ಟಿದ್ದರು. ಕೆಲವು ದಿನಗಳ ಹಿಂದೆ ಬೆಂಗಳೂರಿನ ಆಪ್ತ ಸ್ನೇಹಿತ ಮತ್ತು ಅಡುಗೆ ಭಟ್ಟನಿಗೆ ಚೆನ್ನೈಗೆ ಬರಲು ಹೊಸ ನಂಬರ್ ನಿಂದ ಕರೆ