ಸ್ವಾಭಾವಿಕವಾಗಿ ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಂಗಳೂರಲ್ಲಿ ಮಾಧ್ಯಮದವ್ರ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪಕ್ಷವನ್ನ ಮಾತೃ ಸಮಾನವಾಗಿ ನೋಡಿಕೊಂಡು ಪಕ್ಷದ ಹಿರಿಯರ ಸೂಚನೆ ಪ್ರಕಾರ ನಡೆದುಕೊಳ್ತೇನೆ ಅಂದಿದ್ದಾರೆ. ಇದು ದೇಶಕ್ಕೆ ಮತ್ತು ರಾಜ್ಯಕ್ಕೆ ಮಾದರಿಯಾಗಬಲ್ಲ ಕಾರ್ಯಕರ್ತನ ಮಾತು. ಕಾಲಕಾಲಕ್ಕೆ ಹೈಕಮಾಂಡ್ ನಿಂದ ಬರೋ ಸೂಚನೆ ಪಾಲಿಸೋದಾಗಿ ಹೇಳಿದ್ದಾರೆ. ಮುಂದಿನದ್ದನ್ನ ಸಿಎಂ, ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ನಿರ್ಧಾರ ಮಾಡ್ತಾರೆ