ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕ್ಯಾಮರಾಕ್ಕೆ ಉಗುಳಿದ ಕಸಬ್, ಪೊಲೀಸರೊಂದಿಗೆ ಜಗಳ (Ajmal Kasab | Pakistani terrorist | Mumbai attacks | Bombay High Court)
Bookmark and Share Feedback Print
 
ಮುಂಬೈ ಮೇಲೆ ದಂಡೆತ್ತಿ ಬಂದು ಅಮಾಯಕರನ್ನು ತರಿದು ಹಾಕಿದ್ದ ಪಾಕಿಸ್ತಾನಿ ಪಾತಕಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ತನ್ನ ದಾಷ್ಟ್ಯವನ್ನು ಇಂದು ಸಹ ಮುಂದುವರಿಸಿದ್ದಾನೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿರುವ ವಿಚಾರಣೆಯನ್ನು ತೀವ್ರವಾಗಿ ವಿರೋಧಿಸಿದ ಆತ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದದ್ದಲ್ಲದೆ, ವೀಡಿಯೋ ಕ್ಯಾಮರಾಕ್ಕೆ ಉಗಿದಿದ್ದಾನೆ.

ಇದನ್ನೂ ಓದಿ: ಅತ್ತ ವಿಚಾರಣೆ; ಇತ್ತ ಕಸಬ್‌ನಿಂದ ಆಕಳಿಕೆ, ನಗು, ಕೆರೆತ!

ಮುಂಬೈ ವಿಶೇಷ ನ್ಯಾಯಾಲಯವು ಪಾತಕಿ ಕಸಬ್ ದೋಷಿ ಎಂದು ತೀರ್ಪು ನೀಡಿ, ಆತನಿಗೆ ಮರಣ ದಂಡನೆ ವಿಧಿಸಿತ್ತು. ಅದನ್ನು ಖಚಿತಪಡಿಸುವ ಸಂಬಂಧ ಬಾಂಬೆ ಹೈಕೋರ್ಟಿನಲ್ಲಿ ವಿಚಾರಣೆ ಆರಂಭವಾಗಿದೆ. ಇಂದು ಎರಡನೇ ದಿನದ ವಿಚಾರಣೆಯು ಮುಂದುವರಿಯಿತು.
PTI

ಆರ್ಥರ್ ರೋಡ್ ಜೈಲಿನಲ್ಲಿರುವ ಕಸಬ್ ವಿಚಾರಣೆ ಆರಂಭವಾದಾಗ ಹಸನ್ಮುಖಿಯಾಗಿಯೇ ಇದ್ದ. ಆದರೆ ಇದ್ದಕ್ಕಿದ್ದಂತೆ ಕೋಪಗೊಂಡು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ. ಇದು ನ್ಯಾಯಾಲಯದಲ್ಲಿ ಅಳವಡಿಸಲಾಗಿದ್ದ ದೊಡ್ಡ ಪರದೆಯಲ್ಲಿ ಮೂಡಿ ಬಂತು.

ಈ ಹೊತ್ತಿಗೆ ವೀಡಿಯೋ ಕಾನ್ಫರೆನ್ಸ್‌ನ ಆಡಿಯೋ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇದರಿಂದ ಮತ್ತಷ್ಟು ಉದ್ರೇಕಗೊಂಡ ಕಸಬ್, ಮೊದಲ ಹಂತದ ವಿಚಾರಣೆಯ ಮುಕ್ತಾಯದ ಹಂತದಲ್ಲಿ ನೇರವಾಗಿ ಕ್ಯಾಮರಾಕ್ಕೆ ಉಗುಳಿದ. ಅಲ್ಲದೆ ತೀವ್ರ ಕೋಪಗೊಂಡು, ತಾನು ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಬಯಸುತ್ತಿರುವುದಾಗಿ ಕೂಗಿಕೊಂಡ.

ನಂತರ ಭೋಜನಕ್ಕಾಗಿ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆಯವರು ತೆರಳಿದರು.

ಅದಕ್ಕೂ ಮೊದಲು, ವಿಚಾರಣೆ ಆರಂಭವಾಗುತ್ತಿದ್ದಂತೆ ಕಸಬ್ ತಾನು ವೀಡಿಯೋ ಕಾನ್ಫರೆನ್ಸ್ ಬದಲಿಗೆ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತೇನೆ, ಇದಕ್ಕೆ ಅವಕಾಶ ನೀಡಿ ಎಂದು ನ್ಯಾಯಮೂರ್ತಿಗಳನ್ನು ಒತ್ತಾಯಿಸಿದ್ದ.

ಮೇಡಂ, ನಾನು ನ್ಯಾಯಾಲಯಕ್ಕೆ ಬರಲು ಇಚ್ಛಿಸುತ್ತಿದ್ದೇನೆ ಎಂದಾಗ, ಇದಕ್ಕೆ ಪ್ರತಿಕ್ರಿಯಿಸಿದ ದೇಸಾಯಿ, ಈ ವಿಚಾರವನ್ನು ನಂತರ ಪೀಠವು ಗಣನೆಗೆ ತೆಗೆದುಕೊಳ್ಳಲಿದೆ ಎಂದರು.

ಇದಾದ ಸ್ವಲ್ಪ ಹೊತ್ತಿನ ನಂತರ ಚಡಪಡಿಕೆ ವರ್ತನೆ ತೋರಿಸಿದ ಆತ, ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ. ಆದರೆ ಈ ಸಂದರ್ಭದಲ್ಲಿ ಆತ ಏನು ಮಾತನಾಡಿದ್ದಾನೆ ಎಂಬುದು ಆಡಿಯೋ ವ್ಯವಸ್ಥೆಯ ಸಮಸ್ಯೆ ಹಿನ್ನೆಲೆಯಲ್ಲಿ ತಿಳಿದು ಬಂದಿಲ್ಲ.

ಕಸಬ್ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಮೂರ್ತಿಗಳು, ಆತನ ವರ್ತನೆ ತೀವ್ರವಾದದ್ದು, ಪುಂಡಾಟಿಕೆಯಿಂದ ಕೂಡಿದ್ದು ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ