ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿ
2ಜಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಹಾಗೂ ಚಿದಂಬರಂ ಪಾತ್ರವಿರುವ ಕುರಿತು ಈಗಾಗಲೇ ಬಿಜೆಪಿ ಸಂಸದ ಮುರಳಿ ಮನೋಹರ ಜೋಷಿ ನೇತೃತ್ವದ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (ಪಿಎಸಿ) ತನಿಖಾ ವರದಿ ಸಿದ್ಧಪಡಿಸಿತ್ತು. ಆದರೆ ಕಾಂಗ್ರೆಸ್ ಹಾಗೂ ಯುಪಿಎ ಸದಸ್ಯರು ಈ ವರದಿಯು ಸ್ವೀಕಾರವಾಗದಂತೆ ನೋಡಿಕೊಂಡಿದ್ದು, ಪ್ರಧಾನಿ, ಚಿದಂಬರಂ ಹೆಸರು ಹೊರಗೆ ಬಾರದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಸಂಸತ್ತಿನಲ್ಲಿಯೂ ಎ.ರಾಜಾ ಅವರಿಗೆ ಇದರ ಕುರಿತು ಧ್ವನಿಯೆತ್ತಲು ಅವಕಾಶ ದೊರೆತಿರಲಿಲ್ಲ. ಆದರೆ ತನ್ನನ್ನು ಮಾತ್ರ ಜೈಲಿಗೆ ತಳ್ಳಲಾಗಿರುವುದರಿಂದ ಹತಾಶಗೊಂಡಿರುವ ಎ.ರಾಜಾ ಈಗ ನ್ಯಾಯಾಲಯದಲ್ಲಿ ಎಲ್ಲವನ್ನೂ ಬಿಚ್ಚಿಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.