ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಭೂಲ್ ಭುಲಾಯಿಯಾ : ಗುಲ್ಶನ್‌ ನೆನಪು
ಸುದ್ದಿ/ಗಾಸಿಪ್
Feedback Print Bookmark and Share
 
ಬಾಲಿವುಡ್ ಜಗತ್ತಿನಲ್ಲಿ ಸ್ನೇಹದ ಬೆಸುಗೆ ಬಹುಕಾಲ ಉಳಿಯುವುದು ಅಪರೂಪ. ಇಂದು ಸ್ನೇಹಿತರು ನಾಳೆ ಶತ್ರುಗಳಾಗಬಹುದು. ಆದರೆ ಸ್ನೇಹಿತರ ಕಣ್ಮರೆ ಬಳಿಕವೂ ಕೊಟ್ಟ ಮಾತನ್ನು ಉಳಿಸಿಕೊಂಡವರು ಪ್ರಿಯದರ್ಶನ್.

ಟಿ-ಸೀರೀಸ್ ಕಂಪನಿಯ ಮಾಲೀಕ ದಿವಂಗತ ಗುಲ್ಶನ್ ಕುಮಾರ್‌, ಪ್ರಿಯದರ್ಶನ್ ಅವರ ಗರ್ದಿಶ್ ಚಿತ್ರವನ್ನು ನೋಡಿ ಅಪಾರ ಮೆಚ್ಚಿಕೊಂಡಿದ್ದರು. ಇನ್ನೊಂದು ಚಿತ್ರಕ್ಕಾಗಿ ಮುಂಗಡ ಹಣವನ್ನು ಕೂಡ ಪ್ರಿಯದರ್ಶನ್‌ಗೆ ನೀಡಿ ಹರಸಿದ್ದರು.

ಆದರೆ ಗುಲ್ಶನ್ ಕುಮಾರ್ ಇಂದು ಕಣ್ಮರೆಯಾಗಿರಬಹುದು. ಆದರೆ ಪ್ರಾಮಿಸ್ ಮಾಡಿದ ಮೇಲೆ ಮುಗಿಯಿತು. ಗುಲ್ಶನ್ ತಮ್ಮ ಮೇಲಿಟ್ಟ ವಿಶ್ವಾಸಕ್ಕೆ, ಸ್ನೇಹಕ್ಕೆ ದ್ರೋಹ ಬಗೆಯುವಂತ ವ್ಯಕ್ತಿ ಪ್ರಿಯದರ್ಶನ್ ಅಲ್ಲ.

ನೀಡಿದ ಭರವಸೆಗೆ ಚ್ಯುತಿ ಬರದಂತೆ "ಭೂಲ್ ಭುಲಾಯಿಯಾ" ಚಿತ್ರ ನಿರ್ಮಾಣಕ್ಕೆ ಪ್ರಿಯದರ್ಶನ್ ಚಾಲನೆ ನೀಡಿದರು. ಗುಲ್ಶನ್ ಕುಮಾರ್ ಸಂಸ್ಥಾಪಕ ಕಂಪೆನಿ ಟೀ-ಸೀರೀಸ್ ಈ ಚಿತ್ರನಿರ್ಮಾಣಕ್ಕೆ ಕೈಹಾಕಿದೆ.

ಅಕ್ಷಯ ಕುಮಾರ್, ವಿದ್ಯಾ ಬಾಲನ್, ಶಿನೆಯ್ ಅಹುಜಾ, ಅಮಿಶಾ ಪಟೇಲ್, ಪರೇಶ್ ರಾವಲ್ ಮತ್ತು ರಾಜ್‌ಪಾಲ್ ಯಾದವ್ ಪಾತ್ರಾಭಿನಯದಲ್ಲಿ ಅ.12ರಂದು ಚಿತ್ರ ಬಿಡುಗಡೆಗೆ ಕಾದಿದೆ.