ಅನಂತ್ಗೆ ಹಿಚ್ಕಾಕ್ ಸ್ಫೂರ್ತಿ
ಮುಂಬಯಿ, ಗುರುವಾರ, 13 ಸೆಪ್ಟೆಂಬರ್ 2007( 18:07 IST )
ಚಿತ್ರನಿರ್ಮಾಪಕರಾಗಿ ನೀವು ಸಸ್ಪೆನ್ಸ್ ಚಿತ್ರಕ್ಕೆ ಯಾವುದೇ ಪರ್ಯಾಯ ಅಂತ್ಯ ಇಲ್ಲವೆಂಬ ರೀತಿಯಲ್ಲಿ ಚಿತ್ರವನ್ನು ಮುಕ್ತಾಯಗೊಳಿಸಬೇಕು ಎಂದು ಸಸ್ಪೆನ್ಸ್ ತ್ರಿಲ್ಲರ್ಗಳ ಜನಕ ಹಿಚ್ಕಾಕ್ ನುಡಿಯನ್ನು ಅನಂತ್ ಮಹಾದೇವನ್ ಹೇಳುತ್ತಾರೆ.
ಅನಂತ್ ಅವರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಅಗ್ಗಾರ್ ಶುಕ್ರವಾರ ಬಿಡುಗಡೆಯಾಗಲಿದೆ. ಅನಂತ್ರ ಮೂರನೇ ಥ್ರಿಲ್ಲರ್ ಚಿತ್ರ ಅಂಜಾಮ್. ತಾವು ನೋಡಿದ ದೃಶ್ಯ ಪ್ರೇಕ್ಷಕರಿಗೆ ಆಸಕ್ತಿ ಹುಟ್ಟಿಸುವಂತಿರಬೇಕು. ಚಿತ್ರವನ್ನು ವೀಕ್ಷಿಸಿದ ಬಳಿಕ ಅವರು ಕಥೆಯನ್ನು ಹಿಂದಕ್ಕೆ ಎಳೆದು ಹಿನ್ನೋಟವನ್ನು ಮೆಚ್ಚಬೇಕು ಎಂದು ಅನಂತ್ ಹೇಳಿದರು.
ಅಗ್ಗಾರ್ ಬಗ್ಗೆ ವಿವರಿಸಿದ ಅವರು, ಅಗ್ಗಾರ್ ಸಂಬಂಧಗಳನ್ನು ಕುರಿತ ಕಥೆ. ಜೀವಮಾನದಲ್ಲಿ ಸಂಭವಿಸುವ ದೊಡ್ಡ ಮತ್ತು ಸಣ್ಣ ಸಂಗತಿಗಳನ್ನು ಕಥೆ ಆಧರಿಸಿದೆ. ಪ್ರೀತಿ ಬಾವೋದ್ವೇಗಕ್ಕೆ ತಿರುಗಿದರೆ ಏನಾಗುತ್ತದೆ? ಬಾವೋದ್ವೇಗ ವಿಶ್ವಾಸಘಾತಕ್ಕೆ ತಿರುಗಿದರೆ ಏನಾಗುತ್ತದೆ?
ನಾವು ಅತಿಯಾಗಿ ಭಯಪಡುವ ಸಂಗತಿ ನಿಜವಾದರೆ ಏನಾಗುತ್ತದೆ? ಇವೆಲ್ಲವನ್ನೂ ಚಿತ್ರದಲ್ಲಿ ಶೋಧಿಸಿದ್ದೇನೆ ಎಂದು ಅನಂತ್ ಹೇಳಿದರು. ತುಷಾರ್ ಮತ್ತು ಶ್ರೇಯಾಸ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಅಗ್ಗಾರ್ನ ಮುಖ್ಯ ಬಲ ಅದರ ವಿಶಿಷ್ಠ ಪಾತ್ರವರ್ಗ ಎಂದು ಅವರು ಹೇಳಿದರು.