ತಮ್ಮ ಹೊಸ ಚಿತ್ರ ಭನ್ವಾರಾದಲ್ಲಿ ನಾಲ್ವರು ಕಿರುತೆರೆಯ ನಟರಾದ ಈಜಾಸ್ ಖಾನ್, ಮನವ್ ಗೋಹಿಲ್, ಸಂಗೀತ ಘೋಷ್ ಮತ್ತು ಶ್ವೇತ ಸಾಲ್ವೆ ಅವರನ್ನು ಹಾಕಿಕೊಳ್ಳುವ ನಿರ್ಧಾರದ ಬಗ್ಗೆ ಕೇಳಿಬರುತ್ತಿರುವ ಮಾತಿಗೆ ಧರ್ಮೇಶ್ ದರ್ಶನ್ ಪುಳಕಿತರಾಗಿದ್ದಾರೆ.
ಜನರು ತಮ್ಮ ನಡೆಯನ್ನು ಹಿನ್ನಡೆ ಎಂದು ಭಾವಿಸಿರಬಹುದು. ಆದರೆ ಚಿತ್ರಕಥೆ ಏನನ್ನು ಬಯಸುತ್ತದೆ ಎಂದು ಬೇರೆಯವರಿಗೆ ಏನು ಗೊತ್ತಿರುತ್ತದೆ? ನನಗೆ ಪೂರ್ಣ ಹೊಸಬರೂ ಬೇಕಾಗಿಲ್ಲ. ಅಥವಾ ಜನಪ್ರಿಯ ನಟರೂ ಬೇಕಾಗಿಲ್ಲ. ಆದರೆ ಕ್ಯಾಮೆರಾ ಎದುರು ಸ್ವಲ್ಪ ಅನುಭವವಿರುವ ನಟರು ನನಗೆ ಬೇಕಿತ್ತು. ಇದರಿಂದ ಅವರಿಗೆ ನನ್ನದೇ ರೀತಿಯಲ್ಲಿ ಆಕಾರ ಕೊಟ್ಟು ರೂಪಿಸಬಹುದು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಮುಂಬೈನ ಆಡಂಬದ ಸೆಟ್ಗಳಲ್ಲಿ ಮತ್ತು ಕೆನಡಾ ಹಾಗೂ ಆಸ್ಟ್ರೇಲಿಯದಲ್ಲಿ ಭನ್ವಾರಾ ಚಿತ್ರೀಕರಣ ನಡೆಯಲಿದೆ. ಈ ಚಿತ್ರಕ್ಕೆ ತಮ್ಮ ಸ್ವಯಾರ್ಜಿತ ಹಣವನ್ನು ಹೂಡಿಕೆ ಮಾಡಿದ್ದೇನೆ. ನನಗೆ ಮಾರುಕಟ್ಟೆಯಲ್ಲಿ ಸಂಪೂರ್ಣ ವಿಶ್ವಾಸವಿದೆ.
ದರ್ಮೇಶ್ ದರ್ಶನ್ ಪಲಾಯನವಾದಿಯಲ್ಲ ಎಂದು ಜನರಿಗೆ ಗೊತ್ತು. ಭನ್ವಾರಾದಿಂದ ಹಣ ಮಾಡದಿದ್ದರೂ, ಚಿತ್ರನಿರ್ಮಾಣ ಸಂಸ್ಥೆ ಸ್ಥಾಪಿಸುವ ನನ್ನ ಗುರಿ ಈಡೇರಿದೆ ಎಂದು ಅವರು ಹೇಳಿದರು.