ಸಿಲ್ಲಿ ಲಲ್ಲಿ ಧಾರವಾಹಿ ಮೂಲಕ ಎಲ್ಲರ ಮನೆ ಮಾತಾದ ರವಿಶಂಕರ್ ಅವರು ನಟಿಸಿದ ಪಯಣ ಚಿತ್ರ ತಕ್ಕ ಮಟ್ಟಿನ ಯಶಸ್ಸು ಗಳಿಸಿತು. ಈಗ ಅವರ ಮತ್ತೊಂದು ಚಿತ್ರ ನಂಜನಗೂಡು ನಂಜುಂಡ ಚಿತ್ರ ಸೆಟ್ಟೇರಿದೆ.
ಇದೊಂದು ಹಾಸ್ಯಪ್ರಧಾನ ಚಿತ್ರವಾಗಿದ್ದು, ಮತ್ತೊಮ್ಮೆ ತಮ್ಮ ಪ್ರೇಕ್ಷಕರನ್ನು ನಗಿಸಲು ರವಿಶಂಕರ್ ಸಿದ್ಧರಾಗಿದ್ದಾರೆ. ಚಿತ್ರದ ಟೈಟಲ್ನಂತೆ ಚಿತ್ರ ತುಂಬಾ ನಗೆ ಹೊನಲು ಹೊಮ್ಮಲಿದೆಯಂತೆ.
ಇತ್ತೀಚೆಗೆ ನಡೆದ ಮುಹೂರ್ತ ಸಮಾರಂಭದಲ್ಲಿ ದುನಿಯಾ ವಿಜಯ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ನನ್ನ ಮೊದಲ ಚಿತ್ರ ಪಯಣವನ್ನು ಪ್ರೇಕ್ಷಕರು ಮನದುಮಬಿ ಹರಸಿದರು. ಈಗ ಈ ಹೊಸ ಚಿತ್ರವನ್ನು ಹರಸುತ್ತಾರೆ ಎಂಬ ನಂಬಿಕೆ ಇದೆ ಎಂದರು ಚಿತ್ರದ ನಾಯಕ ರವಿಶಂಕರ್.