ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜ್ಞಾನ ಜ್ಯೋತಿ ಸಿದ್ಧಗಂಗಾಗೆ ಗೀತೆ
ಸುದ್ದಿ/ಗಾಸಿಪ್
Feedback Print Bookmark and Share
 
ಜ್ಞಾನ ಜ್ಯೋತಿ ಸಿದ್ಧಗಂಗಾ ಚಿತ್ರದ ಸುಂದರ ಗೀತೆಯೊಂದನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿಯೇ ಇತ್ತೀಚಿಗೆ ಈ ಚಿತ್ರೀಕರಿಸಲಾಯಿತು.

ಇಲ್ಲೊಂದು ವಿಶೇಷತೆ ಎಂದರೆ ವಿಶೇಷತೆಯೆಂದರೆ ಗಿನ್ನಿಸ್ ದಾಖಲೆ ಖ್ಯಾತಿಯ ಮಾಸ್ಟರ್ ಕಿಶನ್, ಹಿರಿಯ ನಟ ದೊಡ್ಡಣ್ಣ, ಹಾಗೂ ಸಾವಿರಾ ರು ಮಕ್ಕಳ ಸಮ್ಮುಖದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ತುಮಕೂರಿನ ಶ್ರೀ ಸಿದ್ಧಗಂಗಾ ಶ್ರೀಗಳೇ ಈ ಚಿತ್ರಕ್ಕೆ ಸ್ಫೂರ್ತಿ. ಚಿತ್ರದ ಹೆಸರು ಜ್ಞಾನ ಜ್ಯೋತಿ ಸಿದ್ಧಗಂಗಾ. ಶ್ರೀಗಳ ಸಮಾಜ ಸೇವೆ, ದಿನ ನಿತ್ಯ ಮಠದಲ್ಲಿ ನಡೆಯುವ ಅನ್ನದಾನ, ಅಭಯದಾನ, ವಿದ್ಯಾದಾನಗಳ ಬಗ್ಗೆ ಸವಿವರವಾಗಿ ದಾಖಲಿಸಿಕೊಳ್ಳಲಾಗುತ್ತಿದೆ.
ಭರದಿಂದ ಚಿತ್ರೀಕರಣ ನಡೆಯುತ್ತಿರುವ ಇದರಲ್ಲಿ ಶ್ರೀಗಳ ಬದುಕಿನ ಸುತ್ತಲಿನ ವಿವಿಧ ಘಟನೆಗಳನ್ನು ಚಿತ್ರೀರಿಸಲಾಗುತ್ತಿದೆ.

ಈ ಹಿಂದೆ ರವಿಚಂದ್ರನ್ ತಮ್ಮ ಶಾಂತಿ ಕ್ರಾಂತಿ ಚಿತ್ರದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಪುಟಾಣಿಗಳ ಸಮ್ಮುಖದ ಲ್ಲಿ ಚಿತ್ರೀಕರಣ ನಡೆಸಿದ್ದರು. ಅದಾದ ಬಳಿಕ ಜ್ಞಾನ ಜ್ಯೋತಿ ಸಿದ್ಧಗಂಗಾ ಚಿತ್ರದಲ್ಲಿ 20 ಸಾವಿರಕ್ಕೂ ಅಧಿಕ ಪುಟಾಣಿಗಳ ಸಮ್ಮುಖದಲ್ಲಿ ಚಿತ್ರೀಕರಿಸುವ ಮುಖೇನ ಹೊಸ ದಾಖಲೆ ಬರೆಯಲಾಗಿದೆ.

ಈ ಚಿತ್ರದಲ್ಲಿ ನಟಿ ತಾರಾ, ಶ್ರೀನಿವಾಸ ಮೂರ್ತಿ, ವಿನಯಾ ಪ್ರಸಾದ್, ಚೇತನ್, ರಮೇಶ್ ಭಟ್, ನಟಿಸುತ್ತಿದ್ದಾರೆ. ಮಂಜುನಾಥ್ ನಿರ್ದೇಶನದಲ್ಲಿ ನೃತ್ಯ ನಿರ್ದೇಶನ ಪೂರ್ಣಗೊಂಡಿದೆ.