ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಏಕೆ ಹೀಗೆ ನಮ್ಮ ನಡುವೆಗೆ ಸುವರ್ಣ ಸಂಭ್ರಮ
ಸುದ್ದಿ/ಗಾಸಿಪ್
Feedback Print Bookmark and Share
 
ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುವ ಏಕೆ ಹೀಗೆ ನಮ್ಮ ನಡುವೆ ಧಾರಾವಾಹಿಗೆ ಈಗ 50ರ ಕಂತು ದಾಟಿದ ಸಂಭ್ರಮ. ಇದನ್ನು ಹಂಚಿಕೊಳ್ಳಲೆಂದೇ ಧಾರಾವಾಹಿಯ ತಂಡ ಪತ್ರಿಕಾ ಗೋಷ್ಠಿಯೊಂದನ್ನು ಆಯೋಜಿಸಿತ್ತು.

ಸಾಹಿತ್ಯಿಕ ಮೌಲ್ಯ ತುಂಬಿದ್ದ ಈ ಧಾರಾವಾಹಿಯನ್ನು ಜನ ಮೆಚ್ಚುತ್ತಾರಾ ಇಲ್ಲವಾ ಎಂಬ ಭಯ ನಿರ್ದೇಶಕ ರಮೇಶ್ ಬೇಗಾರ್‌ರವರಿಗೆ ಕಾಡಿತ್ತಂತೆ. ಆದರೆ ದಿನದಿಂದ ದಿನಕ್ಕೆ ಜನ ಮೆಚ್ಚುಗೆಯನ್ನು ತೋರಿಸಿಕೊಟ್ಟಿದ್ದಾರೆ ಎಂಬುದು ಅವರಿಗೆ ಸಮಾಧಾನ ತಂದಿದೆಯಂತೆ.

ಸಾಮಾನ್ಯವಾಗಿ ಧಾರಾವಾಹಿಗಳ ಚಿತ್ರೀಕರಣ ಬೆಂಗಳೂರನ್ನು ಬಿಟ್ಟು ಆಚೆ ಹೋಗುವುದಿಲ್ಲ. ಆದರೆ ಈ ಧಾರಾವಾಹಿಗಾಗಿ ಶೃಂಗೇರಿಯ ಮಲೆನಾಡಿನ ರಮ್ಯತಾಣದಲ್ಲಿ ಚಿತ್ರೀಕರಣ ನಡೆಸಿರುವುದು ಒಂದು ಹೆಗ್ಗಳಿಕೆ. ಪಶ್ಚಿಮಘಟ್ಟ ಶ್ರೇಣಿಯ ಪ್ರದೇಶದಲ್ಲಿನ ಜನ ಮಾತಾಡುವ ಶೈಲಿಯ ಕನ್ನಡವನ್ನೇ ಈ ಧಾರಾವಾಹಿಯಲ್ಲೂ ಬಳಸಿರುವುದು ಹಾಗೂ ಸ್ಥಳೀಯ ರಂಗ ಕಲಾವಿದರನ್ನು ಬಳಸಿಕೊಂಡಿರುವುದು ಇಲ್ಲಿನ ವಿಶೇಷ.

ಧಾರಾವಾಹಿಯ ಮುಂದಿನ ಕಂತುಗಳಲ್ಲಿ ಯಕ್ಷಗಾನವನ್ನು ಬಳಸಿಕೊಳ್ಳುವುದಲ್ಲದೇ ರೋಚಕ ತಿರುವುಗಳನ್ನೂ ಒದಗಿಸಲಾಗುವುದು ಎಂಬುದು ನಿರ್ದೇಶಕರ ಹೇಳಿಕೆ. ಧಾರಾವಾಹಿ ಅವರ ಹೇಳಿಕೆಯಷ್ಟೇ ರೋಚಕವಾಗಿರಲಿ ಎಂಬುದು ನಮ್ಮ ಬಯಕೆ ಮತ್ತು ಹಾರೈಕೆ.