ಕೆಲ ಸಮಯದ ಹಿಂದೆ 'ಯುಗ ಯುಗಗಳೇ ಸಾಗಲಿ' ಎಂಬ ಚಿತ್ರ ಬಂದು ಹೋಗಿದ್ದು ಜಾಸ್ತಿ ಮಂದಿಗೆ ತಿಳಿದಿರಲಿಕ್ಕಿಲ್ಲ. ಅದರ ನಾಯಕ ಯಶ್ಗೆ ನಂತರ ಅವಕಾಶಗಳೂ ಸಿಗಲಿಲ್ಲ. ಇತ್ತೀಚೆಗೆ ಸಂಗಮ ಚಿತ್ರದಲ್ಲಿ ಎರಡನೇ ನಾಯಕನ ಪಟ್ಟಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.
MOKSHA
ಈಗ ಯಶ್ಗೆ ಮತ್ತೆ ನಾಯಕನ ಪಟ್ಟ ಸಿಕ್ಕಿದೆ. 'ಶಿಶಿರ' ಎಂಬ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಶಿಷ್ಯ ಮಂಜು ಸ್ವರಾಜ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಇವರು ನಾಯಕನಾಗಿ ನಟಿಸಲಿದ್ದಾರೆ.
ವೆಂಕಟ ಇನ್ ಸಂಕಟ ಚಿತ್ರದ ನಾಯಕಿಯರಲ್ಲೊಬ್ಬರಾದ ಮೇಘನಾ ಈ ಚಿತ್ರದಲ್ಲಿ ಮೊದಲ ಬಾರಿಗೆ ಪರಿಪೂರ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಸದಭಿರುಚಿಯ ಚಿತ್ರ. ಮನಃಶಾಸ್ತ್ರದ ಸುತ್ತ ಕತೆ ಸುತ್ತುತ್ತದಂತೆ. ಚಿತ್ರವನ್ನು ಮಹದೇವ್ ಹಾಗೂ ಮಂಜು ನಿರ್ಮಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ.