ಸ್ನೇಹ- ಪ್ರೀತಿಯ ಸಮಾಗಮ
ಬುಧವಾರ, 12 ನವೆಂಬರ್ 2008( 17:31 IST )
ಸ್ನೇಹಿತರು ಪ್ರೇಮಿಗಳಾಗುವುದು ಸಮಾಗಮ ಚಿತ್ರದ ಕಥೆ. ತನ್ನ ತಂದೆಯ ಮಾತನ್ನು ಉಳಿಸಿಕೊಳ್ಳುವುದೋ, ಪ್ರೀತಿಯ ಹಿಂದೆ ಹೋಗುವುದೋ ಎನ್ನುವುದು ಚಿತ್ರದ ನಾಯಕನ ಗೊಂದಲ. ಈ ಪ್ರೇಮಕಥೆಗೆ ಪೂರಕವಾಗಿ ಆರು ಹಾಡು, ಮೂರು ಫೈಟ್ಸ್ಗಳೂ ಚಿತ್ರದಲ್ಲಿವೆ.
ಇದೊಂದು ಕೌಟುಂಬಿಕ ಮನರಂಜನಾತ್ಮಕ ಚಿತ್ರವಾಗಿದ್ದು, ಇದರಲ್ಲಿ ಹಾಸ್ಯದ ಲೇಪವೂ ಇದೆ ಎನ್ನುತ್ತಾರೆ ನಿರ್ದೇಶಕ ಕಸ್ತೂರಿ ಜಗನ್ನಾಥ್. ನಮ್ಮ ಚಿತ್ರದಲ್ಲಿ ಖಳನಾಯಕನಿಲ್ಲ. ಪರಿಸ್ಥಿತಿಯೇ ಖಳನಾಗುವುದು ಚಿತ್ರದ ವಿಶೇಷ ಎನ್ನುತ್ತಾರೆ ನಿರ್ದೇಶಕರು.
ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಅಂದಾನಿಗೌಡ ಅವರೆ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಎರಡು ಚಿತ್ರಗಳಿಗೆ ಕೆಲಸ ಮಾಡಿರುವ ಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಹೊಸ ಹುಡುಗ ವಿಶ್ರಾಂತ್ ಚಿತ್ರದ ನಾಯಕ. ಮಲೆಯಾಳಿ ಹುಡುಗಿ ವಿದ್ಯಾಗೆ ಇದು 11ನೇ ಸಿನಿಮಾ. ಕವಿ ಸುಬ್ರಾಯ ಚೊಕ್ಕಾಡಿ ಚಿತ್ರಕ್ಕೆ ಎರಡು ಹಾಡು ರಚಿಸಿದ್ದಾರೆ.