ಜಗ್ಗೇಶ್ ಹಾಗೂ ಎಸ್.ನಾರಾಯಣ್ ಅಭಿನಯದ ಚಿಕ್ಕಪೇಟೆ ಸಾಚಾಗಳು ಚಿತ್ರ ತೆರೆಗೆ ಸಿದ್ಧವಾಗಿದೆ. ನಿರ್ದೇಶಕ ನಾಗೇಂದ್ರ ಮಾಗಡಿ ಸದ್ದಿಲ್ಲದೇ ಚಿತ್ರ ಮುಗಿಸಿದ್ದಾರೆ. ಮಧ್ಯ ಮವರ್ಗದ ಕುಟುಂಬಗಳ ಸಮಸ್ಯೆಯನ್ನು ಅವರು ಚಿತ್ರದಲ್ಲಿ ತೋರಿಸಿದ್ದಾರಂತೆ.
ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣವಾಗಿ ಬೆಂಗಳೂರಿನಲ್ಲಿ ನಡೆದಿದೆ. ಎರಡು ಹಾಡುಗಳನ್ನು ಮಾತ್ರ ಚಿಕ್ಕಮಗಳೂರಿನಲ್ಲಿ ಚಿತ್ರಿಸಿದ್ದಾರೆ. ಮಾಧುರಿ, ಅಶ್ವಿನಿ, ಸರಿತಾ ಜೈನ್ ಮತ್ತು ಸಿಂಧು ಚಿತ್ರದ ನಾಲ್ವರು ನಾಯಕಿಯರು. ಜಗ್ಗೇಶ್-ಎಸ್.ನಾರಾಯಣ್ ಚಿತ್ರದಲ್ಲಿ ಅಣ್ಣ-ತಮ್ಮ.
ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಮುಖ್ಯಮಂತ್ರಿ ಚಂದ್ರು ನಟಿಸಿದ್ದಾರೆ. ಬಿಡುವಿಲ್ಲದ ರಾಜಕಾರಣಗಳ ನಡುವೆಯೂ ಚಂದ್ರು ಮತ್ತು ಜಗ್ಗೇಶ್ ಚಿತ್ರೀಕರಣದಲ್ಲಿ ಪಾಲ್ಗೊಂಡರು ಎಂದು ಕೃತಜ್ಞರಾಗುತ್ತಾರೆ ನಿರ್ದೇಶಕ ನಾಗೇಂದ್ರ. ಚಿತ್ರದಲ್ಲಿ ದೊಡ್ಡಣ್ಣ ಹಾಗೂ ಟೆನ್ನಿಸ್ ಕೃಷ್ಣ ಅವರ ಹಾಸ್ಯ ಚಿತ್ರಕ್ಕಿದೆ. ಚಿಕ್ಕಪೇಟೆ ಸಾಚಾಗಳ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಚಿತ್ರವನ್ನು ನಿರ್ದೇಶಿಸುತ್ತೇನೆ ಎನ್ನುತ್ತಾರೆ ನಾಗೇಂದ್ರ ಮಾಗಡಿ.