ಉಡುಪಿಯ ಒತ್ತಿನೆಣೆ ಎಂಬಲ್ಲಿ ಚಾರ್ಲಿ ಚಾಪ್ಲಿನ್ ಮೂರ್ತಿ ಸ್ಥಾಪಿಸುವ ಕುರಿತು ನಡೆದ ವಿವಾದದ ಹಿನ್ನೆಲೆಯಲ್ಲಿ ಹೌಸ್ಫುಲ್ ಚಿತ್ರದ ನಿರ್ದೇಶಕ ಹೇಮಂತ್ ಹೆಗಡೆ ಪ್ರಾಜೆಕ್ಟ್ ಕೈ ಬಿಟ್ಟಿದ್ದು ಹಳೆ ಸುದ್ದಿ. ಇದೀಗ ಅದೇ ರೂಪದ ಚಿಕ್ಕ ಗಾತ್ರದ ಮೂರ್ತಿಯನ್ನು ಇನ್ನೊವೇಟಿವ್ ಫಿಲಂ ಸಿಟಿಯಲ್ಲಿ ನಿರ್ಮಿಸಲು ನಿರ್ಧರಿಸಿದ್ದಾರಂತೆ.
ಅದಕ್ಕೆ ಕಾರಣ ಇಷ್ಟೆ. ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಮೂರ್ತಿ ಕತೆಗೆ ಅನಿವಾರ್ಯ. ಪಬ್ಲಿಸಿಟಿಗಾಗಿ ಇದೆಲ್ಲಾ ಮಾಡುತ್ತಿಲ್ಲ. ಅನುಮಾನವಿದ್ದರೆ ಸಿನಿಮಾ ನೋಡಿ ಎಂದು ಸ್ಪಷ್ಟಪಡಿಸುತ್ತಾರೆ ನಿರ್ದೇಶಕ ಹೇಮಂತ್ ಹೆಗಡೆ.
ಇದೆಲ್ಲ ಮಾತನಾಡಿದ್ದು, ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ. ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಶೈಲೇಂದ್ರ ಬಾಬು ಹಾಗೂ ಕೆ.ಸಿ.ಎನ್. ಚಂದ್ರಶೇಖರ್ ಬಿಡುಗಡೆ ಮಾಡಿದ್ದಾರೆ. ಚಿತ್ರಕ್ಕೆ ಕಿರಣ್ ಸಂಗೀತ ಸಂಯೋಜಿಸಿದ್ದಾರೆ.