ಕನ್ನಡ ಚಿತ್ರರಂಗದಲ್ಲಿ ಕಿಶೋರ್ ಎಂದಾಕ್ಷಣ ಕಣ್ಣು ಮುಂದೆ ಬರೋದೆ ಗಡ್ಡ ಬಿಟ್ಟ ದಪ್ಪ ದಪ್ಪ ಕಣ್ಣುಗಳು. ಈತ ಯಾರಂತ ಪರಿಚಯ ಮಾಡಬೇಕಿಲ್ಲ ಬಿಡಿ. ಕಂಠಿ ಚಿತ್ರದ ಮೂಲಕ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಇವರು ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟನಾಗಿದ್ದಾರೆ.
ಇವರ ಹೊಸ ವಿಷಯ ಏನಂದರೆ ಬಾಲಿವುಡ್ಡಿಗೂ ಇವರು ಪಾದಾರ್ಪಣೆ ಮಾಡಿದ್ದಾರೆ. ಕಿಶೋರ್ ಇನ್ನು ಮುಂದೆ ಬಾಲಿವುಡ್ ಚಿತ್ರದಲ್ಲೂ ತಮ್ಮ ಕರಾಮತ್ತು ತೋರಿಸಲು ಹೊರಟಿದ್ದಾರೆ. ಅಭಯ್ ಡಿಯೋಲ್ ಮತ್ತು ಶ್ರುತಿ ಹಾಸನ್ ನಟಿಸಲಿರುವ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೆ ಅಲ್ಲ, ಮಣಿರತ್ನಂ ನಿರ್ದೇಶನ ಮಾಡುತ್ತಿರುವ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ನಟಿಸುತ್ತಿರುವ ರಾವಣ ಚಿತ್ರದಲ್ಲೂ ಒಂದು ಪುಟ್ಟ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡ, ಹಿಂದಿ ಚಿತ್ರರಂಗದಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಇವರು ಬಹು ಬೇಡಿಕೆಯ ನಟನಾಗಿದ್ದಾರೆ ಕಿಶೋರ್.