ತಮಿಳಿನತ್ತ ಪ್ರಜ್ಞಾ ಹೆಜ್ಜೆ
ಇತ್ತೀಚೆಗಷ್ಟೇ ಬಿಡುಗಡೆಯಾದ ಪ್ರೀತ್ಸೆ ಪ್ರೀತ್ಸೆ ಚಿತ್ರದಲ್ಲಿ ಸ್ವಲ್ಪವೂ ಅಂಜಿಕೆ ಇಲ್ಲದೆ ಬಿಂದಾಸ್ ಆಗಿ ನಟಿಸಿರುವ ಪ್ರಜ್ಞಾ ಈಗ ತಮಿಳು ಚಿತ್ರರಂಗದಲ್ಲಿ ನಾಯಕಿಯಾಗಲು ಹೊರಟಿದ್ದಾರೆ. ಚಿತ್ರದ ಹೆಸರು ವಳಕ್ಕು ಎನ್ 18/7. ಸೂಪರ್ ಡೂಪರ್ ಹಿಟ್ ಚಿತ್ರ ಕಾದಲ್ ನಿರ್ದೇಶನ ಮಾಡಿದ ಬಾಲಾಜಿ ಶಕ್ತಿವೇಲ್ ಈ ಚಿತ್ರದ ನಿರ್ದೇಶಕರು. ಪ್ರಜ್ಞಾ ಈಗಾಗಲೇ ಏಳು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕೈವಾರ ತಾತಯ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ಬೆಡಗಿ ಕೆಂಪ, ಬಾಬಾ, ಗಣೇಶ ಮತ್ತೆ ಬಂದ, ಮಳೆ ಬಿಲ್ಲೆ, ದೇವ್ರು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ಕೆಂಚದಲ್ಲಿ ಪ್ರಜ್ಞಾ ನಾಯಕಿಯಾಗಿ ಹೆಜ್ಜೆ ಹಾಕಿದ್ದಾರೆ. ಚಿತ್ರ ಜುಲೈ 10ಕ್ಕೆ ಬಿಡುಗಡೆಯಾಗಲಿದೆ. ಹಾಗೆ ಇವರಿಗೆ ತೆಲುಗಿನಲ್ಲೂ ಕೂಡ ಆಫರ್ ಬಂದಿತ್ತಂತೆ. ಆದರೆ ಟೈಮ್ ಅಡ್ಜಸ್ಟ್ ಆಗದ ಕಾರಣ ನೋ ಎಂದಿದ್ದಾರಂತೆ ಪ್ರಜ್ಞಾ. ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆಯಾದ ಪ್ರೀತ್ಸೆ ಪ್ರೀತ್ಸೆ ಚಿತ್ರದಲ್ಲಿ ಪ್ರಜ್ಞಾ ಎಕ್ಸ್ಪೋಸ್ ಮಾಡಿರುವುದು ಬಿಟ್ಟರೆ ನಟನೆ ಹೇಳಿಕೊಳ್ಳುವಂತಿಲ್ಲ. ಇಲ್ಲೀವರೆಗೆ ಇವರು ನಾಯಕಿಯಾಗಿ ಅಭಿನಯಿಸಿರುವ ಚಿತ್ರ ಯಾವುದೂ ಹಿಟ್ ಆಗಿಲ್ಲ. ಸದ್ಯ ಬಿಡುಗಡೆಗೆ ಸಜ್ಜಾಗಿರುವ ಕೆಂಚ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.