ನಿಧಿ ಸುಬ್ಬಯ್ಯರ ಗರಂ ಅವತಾರ
ನಿಧಿ ಸುಬ್ಬಯ್ಯ ಯಾಕೋ ಗರಂ ಆಗಿದ್ದಾರೆ. ಇವರು ಗರಂ ಆಗಲು ಕಾರಣವಾದ್ರು ಏನು ಎಂದರೆ ಅಂಥದ್ದೇನೂ ಕಾಣಿಸೋದಿಲ್ಲ. ಎ.ಆರ್.ಬಾಬು ನಿರ್ದೇಶನದ ಚಮಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ನನ್ನನ್ನು ಹೆಚ್ಚು ಎಕ್ಸ್ಪೋಸ್ ಆಗಿ ಬಳಸಿಕೊಂಡಿದ್ದಾರೆ ಎಂದು ದೂರಿದ್ದಾರೆ ನಿಧಿ. ಆದರೆ ಇದನ್ನು ನಟ ಕೋಮಲ್ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಬೇಕಾದರೆ ಚಿತ್ರ ನೋಡಿದ ನಂತರ ನೀವೇ ಹೇಳಿ ಎಂದು ಪ್ರೇಕ್ಷಕರಿಗೆ ಹೊಣೆ ಹೊರೆಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಆಗಿದೆ. ಸೆನ್ಸಾರ್ ನೋಡಿ ಮೆಚ್ಚಿ ಯು ಪ್ರಮಾಣ ಪತ್ರ ಕೂಡ ಕೊಟ್ಟಿದೆ. ಅಷ್ಟಕ್ಕೂ ಅದೊಂದು ಬೀಚ್ ಸಾಂಗ್. ಹಾಗಾಗಿ ಗ್ಲಾಮರಸ್ ಆಗಿ ತೋರಿಸುವುದು ಕಾಮನ್ ಎಂದು ಸ್ಪಷ್ಟೀಕರಣ ನೀಡುತ್ತಾರೆ ಅವರು.ಚಿತ್ರ ಆರಂಭವಾಗುವುದಕ್ಕಿಂತ ಮುಂಚೆಯೇ ಹೇಳಿದ್ದೇವೆ. ತಮ್ಮ ಪಾತ್ರ ಸ್ವಲ್ಪ ಗ್ಲಾಮರಸ್ ಇದೆ ಎಂದು. ನಿಧಿ ಅದಕ್ಕೆ ಒಪ್ಪಿಕೊಂಡು ನೋ ಪ್ರಾಬ್ಲಮ್ ಎಂದಿದ್ದರು. ಈಗ ನೋಡಿದರೆ ಕಿರಿಕಿರಿ ಶುರು ಮಾಡಿದ್ದಾರೆ. ನಿಧಿ ನಟಿಸಿರುವ ಕಾದಲ್ ಕಾದಲ್ ಚಿತ್ರಕ್ಕೆ ಹೋಲಿಸಿದರೆ ಇದು ಏನೂ ಅಲ್ಲ ಎಂದು ಕೋಮಲ್ ಸಮರ್ಥಿಸಿಕೊಂಡಿದ್ದಾರೆ. ಏನೋಪ್ಪಾ... ಯಾರದ್ದು ನಿಜ, ಯಾರದ್ದು ಸುಳ್ಳು ಅನ್ನೋದೇ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಚಿತ್ರ ಬಿಡುಗಡೆಗಷ್ಟೆ ಕಾಯಬೇಕು.