ಕೊನೆಗೂ ನಿರ್ದೇಶಕ ಪ್ರಕಾಶ್ ಹೇಳಿದ ಮಾತಿನಂತೆ ಗೋಕುಲ ಚಿತ್ರದ ಚಿತ್ರೀಕರಣ ಜುಲೈ 2ರಿಂದ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.
ಗೋಕುಲ ಚಿತ್ರವನ್ನು ಪ್ರಕಾಶ್ ತಮ್ಮದೇ ಬ್ಯಾನರ್ನಡಿಯಲ್ಲಿ ಕಥೆ, ಚಿತ್ರಕಥೆಯನ್ನು ಬರೆದು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಗೋಕುಲ ಬಹು ತಾರಾಗಣವಿರುವ ಚಿತ್ರ. ಚಿತ್ರದಲ್ಲಿ ನಾಲ್ವರು ನಾಯಕರು. ವಿಜಯ ರಾಘವೇಂದ್ರ ಮುಖ್ಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರೆ, ನಾಯಕಿಯಾಗಿ ಪೂಜಾಗಾಂಧಿ ಸಾಥ್ ನೀಡುತ್ತಿದ್ದಾರೆ. ಎರಡನೆ ನಾಯಕ-ನಾಯಕಿಯರಾಗಿ ಯಶ್ ಹಾಗೂ ನಕ್ಷತ್ರ ನಟಿಸುತ್ತಿದ್ದಾರೆ.
ಕೌಟುಂಬಿಕ ಕಥೆ ಹೊಂದಿರುವ ಈ ಚಿತ್ರಕ್ಕೆ ರಮೇಶ್ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕರಾದ ಮನೋಮೂರ್ತಿ ಅವರ ಸಂಗೀತ ನಿರ್ದೇಶನವಿದ್ದರೆ, ಜಯಂತ್ ಕಾಯ್ಕಿಣಿ ಮತ್ತು ಧನಂಜಯ್ ಹಾಡುಗಳನ್ನು ಬರೆದಿದ್ದಾರೆ.