ಅತಿಥಿಗಳಾದ ರಮಣಿತೂ, ಹರೀಶ್
ವಿನೋದ್ ಪ್ರಭಾಕರ್ ನಾಯಕನಾಗಿ ಗೌರಿ ಮುಂಜಾಲ್ ನಾಯಕಿಯಾಗಿ ಅಭಿನಯಿಸುತ್ತಿರುವ ಹೋರಿ ಚಿತ್ರಕ್ಕೆ ಹೊಸ ಅತಿಥಿಗಳ ಪಾದಾರ್ಪಣೆಯಾಗುತ್ತಿದೆ. ಯಾರು ಈ ಅತಿಥಿಗಳು ಎಂದು ಯೋಚಿಸುತ್ತಿದ್ದೀರಾ? ಪಯಣ ಚಿತ್ರದ ನಾಯಕಿ ರಮಣಿತೂ ಚೌಧರಿ ಹಾಗೂ ಇತ್ತೀಚೆಗಷ್ಟೇ ಬಿಡುಗಡೆಯಾದ ಕಲಾಕಾರ್ ಚಿತ್ರದ ನಿರ್ದೇಶನ ಮತ್ತು ನಾಯಕನಾಗಿ ನಟಿಸಿದ ಹರೀಶ ರಾಜ್ ಹೋರಿಯಲ್ಲಿ ಅತಿಥಿ ಪಾತ್ರದಲ್ಲಿ ಬಂದು ಹೋಗಲಿದ್ದಾರೆ. ಇತ್ತೀಚೆಗಷ್ಟೇ ನಾಲ್ಕು ದಿನಗಳ ಕಾಲ ನಿಸರ್ಗ ಹೌಸ್ನಲ್ಲಿ ನಡೆದ ಒಂದು ಹಾಡಿನ ಚಿತ್ರೀಕರಣದಲ್ಲಿ ಕುಣಿದಿದ್ದಾರೆ. ಅದೂ ಒಂದು ಮದುವೆ ಮನೆ ಹಾಡಿನ ಚಿತ್ರೀಕರಣವಂತೆ. ಚಿತ್ರದ ನಿರ್ದೇಶನವನ್ನು ನಾಗೇಂದ್ರ ಮಾಗಡಿಯವರು ಮಾಡುತ್ತಿದ್ದಾರೆ. ರಮಣಿತೂ ಚೌಧರಿ ಸದ್ಯ ದಿನೇಶ್ ಬಾಬು ನಿರ್ದೇಶನದ ಮಿಸ್ಟರ್ ಪೇಂಟರ್ ಹಾಗೂ ಜಯಂತ್ ನಿರ್ದೇಶನದ ಧನುಷ್ ಎಂಬ ಎರಡು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆ ಹರೀಶ್ ರಾಜ್ ಕೂಡ ಕೆಲ ಚಿತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.