ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬೆಂಗಳೂರಿಗೆ ದೊಡ್ಡ ನಮಸ್ಕಾರ ಹೊಡೆದ ನವೀನ್ ಕೃಷ್ಣ! (Dhimaku | Naveen Krishna | Namasthe Bengaluru | Virupaksha)
ಸುದ್ದಿ/ಗಾಸಿಪ್
Feedback Print Bookmark and Share
 
Naveen Krishna
MOKSHA
ಸ್ವಲ್ಪ ಧಿಮಾಕು ತೋರಿಸಿದ್ದ ನವೀನ್ ಕೃಷ್ಣ, ಈಗ ಯಾಕೋ ಬೆಂಗಳೂರಿಗೇ ನಮಸ್ಕಾರ ಹೊಡೆಯುತ್ತಿದ್ದಾರೆ. ಅಂದು ಚಿತ್ರ ತೋಪಾಗಿದ್ದಕ್ಕೆ ಈ ಬಾರಿಯಾದರೂ ಗೆಲ್ಲಿಸಪ್ಪ ಎಂದು ನವೀನ್ ನಮಸ್ಕಾರ ಹೊಡೆಯುತ್ತಿದ್ದಾರೆ ಅಂದುಕೊಳ್ಳಬೇಡಿ. ಧಿಮಾಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನವೀನ್ ಕೃಷ್ಣ ಈಗ ನಮಸ್ತೆ ಬೆಂಗಳೂರು ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹುಶಃ ನವೀನ್ ಹೆಸರು ಮರೆತೇ ಹೋಯಿತೇನು ಅನ್ನುವಾಗ ಈ ಚಿತ್ರದ ಮೂಲಕ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಚಿತ್ರವನ್ನು ವಿರೂಪಾಕ್ಷ ಎಂಬುವವರು ನಿರ್ದೇಶಿಸಿದ್ದಾರೆ. ಕತೆ, ಚಿತ್ರಕತೆ, ನಿರ್ದೇಶನದ ಜತೆಗೆ ನೃತ್ಯವನ್ನೂ ಅವರೇ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ರಂಜಿತಾ ನಾಯಕಿ. ಇದರ ನಡುವೆ ದಯಾಳ್ ನಿರ್ದೇಶನದ ಹರಿಕತೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಧಿಮಾಕು ಚಿತ್ರ ಹಿಟ್ ಆಗಿಲ್ಲವಾದರೂ, ಜನತೆಗೆ ಇವರ ನಟನೆ ಮಾತ್ರ ಮರೆತಿಲ್ಲ. ಇದೀಗ ನಮಸ್ತೆ ಬೆಂಗಳೂರು ಮೂಲಕ ಮತ್ತೆ ಬಂದಿದ್ದಾರೆ. ಧಿಮಾಕಿನಲ್ಲಿ ಕಳೆದುಹೋಗಿದ್ದ ನವೀನ್‌ರನ್ನು ಬೆಂಗಳೂರಿನಲ್ಲಿ ಮತ್ತೆ ಕಾಣಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಧಿಮಾಕು, ನವೀನ್ ಕೃಷ್ಣ, ನಮಸ್ತೇ ಬೆಂಗಳೂರು, ವಿರೂಪಾಕ್ಷ