ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಂತೆ-ಕಂತೆಗಳಿಗೆ 'ಅಭಯ್' ದರ್ಶನ್ (Darshan | Abhay | Mahesh Babu | Babu Reddy)
ಸುದ್ದಿ/ಗಾಸಿಪ್
Feedback Print Bookmark and Share
 
ಕಳೆದ ಹಲವು ತಿಂಗಳುಗಳಿಂದ 'ಅಭಯ್' ಚಿತ್ರದ ಬಗ್ಗೆ ಬರೀ ಅಂತೆ ಕಂತೆಗಳ ಮಾತು ಕೇಳಿ ಬರುತ್ತಿತ್ತು. ಇದೀಗ ಅವೆಲ್ಲದಕ್ಕೂ ಫುಲ್ ಸ್ಟಾಪ್ ನೀಡಲು ಮುಂದಾಗಿದ್ದಾರೆ ದರ್ಶನ್ ಮತ್ತು ನಿರ್ದೇಶಕ ಮಹೇಶ್ ಬಾಬು.

ಇವರಿಬ್ಬರು ಜೊತೆಯಾಗಿ ಮಾಡುತ್ತಿರುವ ಚಿತ್ರ ಇದಾಗಿದೆ. ಇದಕ್ಕೆ ಬಾಂಬೆ ಬೆಡಗಿ ಆರತಿ ಠಾಕೂರ್ ನಾಯಕಿ. ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಎರಡೆರಡು ಬಾರಿ ವಿದೇಶಕ್ಕೆಲ್ಲಾ ಓಡಾಡಿ ಚಿತ್ರ ಮುಗಿಸಿದ್ದಾರೆ. ಸಿನಿಮಾದ ನಿರ್ಮಾಪಕ ಬಾಬು ರೆಡ್ಡಿ.
Darshan
MOKSHA

ಇವೆಲ್ಲಾ ಅದೇಷ್ಟೋ ತಿಂಗಳಿಂದ ಕೇಳಿ ಬರುತ್ತಿತ್ತೇ ವಿನಃ ನಿಖರವಾದ ಮಾಹಿತಿ ಇರಲಿಲ್ಲ. ಚಿತ್ರತಂಡದಲ್ಲಿ ಇರುವ ತಂತ್ರಜ್ಞರು ಹಾಗೂ ತಾರಾ ಬಳಗದಲ್ಲಿ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜನಾರ್ದನ ಮಹರ್ಷಿಯವರದ್ದು. ನಿರ್ದೇಶನ ಮಾತ್ರ ಮಹೇಶ್ ಬಾಬು. ರಮೇಶ್ ಬಾಬು ಛಾಯಾಗ್ರಹಣವಿದೆ. ಜಯಂತ್ ಕಾಯ್ಕಿಣಿ ಹಾಡುಗಳಿಗೆ ಸಾಹಿತ್ಯವಾಗಿದ್ದರೆ, ಸಂಗೀತ ಹರಿಕೃಷ್ಣರದ್ದು. ದರ್ಶನ್, ಆರತಿ ಠಾಕೂರ್, ಪ್ರದೀಪ್ ರಾವುತ್, ಓಂ ಪ್ರಕಾಶ್ ರಾವ್, ಸಲೀಂ ಬೇಗ್, ಆರ್ಯಮಾನ್ ಮುಂತಾದವರ ತಾರಾಬಳಗವಿದೆ.

ಮೈಸೂರು, ಬೆಂಗಳೂರು, ಬ್ಯಾಂಕಾಕ್, ಸ್ವಿಜರ್ಲೆಂಡ್‌ಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಮಾಧ್ಯಮದವರನ್ನು ಸ್ವಲ್ಪ ದೂರವೇ ಇಟ್ಟುಕೊಂಡಿದ್ದ ಚಿತ್ರತಂಡ ಇದೀಗ ಮಾಧ್ಯಮದ ಮುಂದೆ ನಿಲ್ಲಲು ಸಿದ್ಧರಾಗಿದ್ದಾರೆ. ಅದಕ್ಕಾಗಿ ಧ್ವನಿಸುರುಳಿ ಬಿಡುಗಡೆ ಸಮಾರಂಭ ಆಯೋಜಿಸಲು ನಿರ್ಧರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಭಯ್, ದರ್ಶನ್ ತೂಗುದೀಪ, ಮಹೇಶ್ ಬಾಬು, ಆರತಿ ಠಾಕೂರ್, ಬಾಬು ರೆಡ್ಡಿ