ಚಿತ್ರ ಸೋತು ನಿರ್ಮಾಪಕರು ಬೀದಿಗೆ ಇಳಿಯುವುದು ಆಗಾಗ ನಡೆಯುತ್ತಿರುತ್ತದೆ. ಚಿತ್ರ ಬಿಡುಗಡೆಯಾಗೋ ಮೊದಲೇ ಚೆಲುವೆಯೇ ನಿನ್ನ ನೋಡಲು ಚಿತ್ರದ ನಿರ್ಮಾಪಕ ಎನ್.ಎಂ .ಸುರೇಶ್ ಬೀದಿಗಿಳಿದು ಬಿಟ್ಟಿದ್ದಾರೆ. ಇದೇನಪ್ಪಾ, ಅವರಿಗೆ ಏನಾಯ್ತು ಅಂದುಕೊಂಡಿರಾ?
ವಿಷಯ ಏನಪ್ಪ ಅಂದ್ರೆ, ಕನ್ನಡದ ಬಾವುಟ ಹಿಡಿದುಕೊಂಡು ಸುರೇಶ್ ಬೀದೀಲಿ ನೃತ್ಯ ಮಾಡಿದರಂತೆ ಅದೂ ಮುಂಬೈ ಮಹಾ ನಗರಿಯಲ್ಲಿ. ಈ ಬೀದಿ ಕುಣಿತ ಚೆಲುವೆಯೇ ನಿನ್ನ ನೋಡಲು ಚಿತ್ರಕ್ಕಾಗಿ ಮಾಡಿದ ಕಸರತ್ತು. ಮುಂಬೈಗೆ ಹೋಗಿ ಕನ್ನಡದ ಹಾಡು ಹಾಡಿದ್ದಾರೆ ಎಂದು ಗಾಂಧಿನಗರದ ಮಂದಿ ಪಡುವ ಹೆಮ್ಮೆಯ ಬೀಗನ್ನು ನೋಡಲು ಎರಡು ಕಣ್ಣು ಸಾಲದು.
ಸುರೇಶ್ ಮುಂಬೈನಲ್ಲಿ ಕನ್ನಡಕ್ಕಾಗಿ ಕೈ ಎತ್ತಿದ್ದಲ್ಲದೇ ಕಾಲು ಎತ್ತಿರುವುದು ಖುಷಿಯ ವಿಚಾರ ಅಂತ ಕೆಲವರು ಚಿತ್ರದ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರಂತೆ.