ಕನ್ನಡದ ಹೆಮ್ಮೆಯ ನಟ ರಮೇಶ್ ಅರವಿಂದ್ ಈಗ ಸಾಹಿತಿಯ ಹುಡುಕಾಟ ನಡೆಸಿದ್ದಾರೆ. ಈಗಾಗಲೇ ನಿರ್ದೇಶಕರಾಗಿ ರಮೇಶ್ ಆರು ಚಿತ್ರಗಳನ್ನು ಮಾಡಿದ್ದಾರೆ. ಇದೀಗ ಅವರು ಏಳನೇ ಚಿತ್ರ ಮಾಡಲು ಸಜ್ಜಾಗಿದ್ದಾರೆ.
ಈ ದಿಸೆಯಲ್ಲಿ ಅವರಿಗೆ ಕನ್ನಡದ ಅತ್ಯಂತ ಪ್ರಭಾವಿ ಲೇಖಕರ ಅವಶ್ಯಕತೆ ಇದೆಯಂತೆ. ತನ್ನ ಚಿತ್ರದ ಚಿತ್ರಕಥೆಯನ್ನು ಸಾಹಿತ್ಯದ ಜ್ಞಾನ ಇರುವ ವ್ಯಕ್ತಿಯಿಂದಲೇ ಬರೆಸಬೇಕೆಂಬುದು ರಮೇಶ್ ತುಡಿತ. ಏನೇ ಇರಲಿ, ಪ್ರೇಕ್ಷಕರಿಗೆ ಉತ್ತಮ ಪ್ರೊಡಕ್ಟ್ ಕೊಡಬೇಕು ಎಂಬ ತುಡಿತ ಇರುವುದರಿಂದಲೇ ಸಾಹಿತ್ಯದ ಹಿನ್ನೆಲೆ ಹೊಂದಿರುವ ವ್ಯಕ್ತಿಯನ್ನು ಹುಡುಕಾಡಲು ಆರಂಭಿಸಿದ್ದಾರಂತೆ ರಮೇಶ್.
ಸಾಹಿತಿಗಳ ಸಹವಾಸ ಸ್ವಲ್ಪ ಪೇಚಾಟದ್ದೇ ಆದರೂ, ಹಿಡಿದ ಛಲವನ್ನು ಬಿಡದೆ, ಅಂತಿಮವಾಗಿ ದಕ್ಕುವ ಅತ್ಯುತ್ತಮ ಚಿತ್ರಕಥೆಯ ಉದ್ದೇಶಕ್ಕಾದರೂ, ತಾನು ಯಾವುದಾದರೂ ಸಾಹಿತಿಯನ್ನು ಆಯ್ಕೆ ಮಾಡಿಯೇ ತೀರುತ್ತೇನೆ ಎಂದು ಪಣ ತೊಟ್ಟಿದ್ದಾರೆ ರಮೇಶ್.