ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತವರಿನ ಋಣ ತೀರಿಸಲಿರುವ ಕಿಟ್ಟಿ (Thavarina Runa | Shrinagara Kitty)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಶ್ರೀನಗರ ಕಿಟ್ಟಿಗೆ ನಿಜವಾಗಿಯೂ ಅದೃಷ್ಟ ಕುಲಾಯಿಸಿದೆ. 'ಮತ್ತೆ ಮುಂಗಾರು' ಚಿತ್ರದಲ್ಲಿ ನಾಯಕನಾಗಿ ಆಯ್ಕೆಯಾದ ಕಿಟ್ಟಿ ಇದೀಗ ಮತ್ತೊಂದು ಚಿತ್ರ ತವರಿನ ಋಣಕ್ಕೂ ಸಹಿ ಹಾಕಿ ಬಿಟ್ಟಿದ್ದಾರೆ.

ಮಳೆಯೂ ಬರಲಿ ಮಂಜೂ ಇರಲಿ ಚಿತ್ರದಲ್ಲಿ ಕಿಟ್ಟಿ ಹಾಗೂ ನಾಗಕಿರಣ್ ಒಟ್ಟಾಗಿ ದುಡಿದಿದ್ದರು. ಇದೇ ಜೋಡಿಯ ಕಾರು ಬಾರು ಈ ಚಿತ್ರದಲ್ಲೂ ಮುಂದುವರೆಯಲಿದೆ. ಕೆ.ಎಲ್. ಹರೀಶ್ ನಿರ್ಮಾಣದ ತವರಿನ ಋಣ ಚಿತ್ರದ ಚಿತ್ರೀಕರಣ ಜನವರಿ 15ರಿಂದ ಆರಂಭವಾಗಲಿದೆ. ಸುಧೀರ್ ಅತ್ತಾವರ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಸುಧೀರ್ ಎಂ.ಎಸ್.ಸತ್ಯು ಅವರ ಶಿಷ್ಯನಾಗಿದ್ದು , ಸವಾರಿ, ಸ್ವಯಂವರ, ಇಜ್ಜೋಡು ಚಿತ್ರಗಳಿಗೆ ಗೀತೆಗಳನ್ನು ರಚಿಸಿ ಖ್ಯಾತಿಯನ್ನೂ ಗಳಿಸಿದ್ದಾರೆ. ತವರಿನ ಋಣ ಚಿತ್ರಕ್ಕೆ ಗಣೇಶ್ ಶೆಟ್ಟಿ ಕಥೆ ಒದಗಿಸಿದ್ದು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತವರಿನ ಋಣ, ಶ್ರೀನಗರ ಕಿಟ್ಟಿ