ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶಿವ- ಪಾರ್ವತಿ ಭೂಲೋಕಕ್ಕೆ ಬರುತ್ತಿದ್ದಾರೆ! (Shiva Parvathi | Shambho Shankara | Chindodi)
ಸುದ್ದಿ/ಗಾಸಿಪ್
Bookmark and Share Feedback Print
 
ಕನ್ನಡ ರಂಗಭೂಮಿಯಲ್ಲಿ ಹೆಸರು ಮಾಡಿದ ಚಿಂದೋಡಿ ಕುಟುಂಬ ಇದೀಗ ಶಂಭೋಶಂಕರ ಹೆಸರಿನ ಭಕ್ತಿ ಪ್ರಧಾನ ಚಿತ್ರವನ್ನು ಬೆಳ್ಳಿ ತೆರೆಯ ಮೇಲೆ ನಿರ್ಮಿಸಲು ಹೊರಟಿದೆ.

ಈಗಾಗಲೇ ಮುಕ್ಕಾಲು ಭಾಗ ಶೂಟಿಂಗ್ ಮುಗಿಸಿರುವ ಈ ಚಿತ್ರವನ್ನು ಚಿಂದೋಡಿ ಬಂಗಾರೇಶ್ ನಿರ್ದೇಶಿಸಿದರೆ ಅವರ ಸಹೋದರ ಚಿಂದೋಡಿ ಶ್ರೀಕಂಠೇಶ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಭೂಲೋಕದಲ್ಲಿ ಒಡೆದ ಸಂಸಾರವೊಂದನ್ನು ಕೂಡಿಸಲು ಶಿವ-ಪಾರ್ವತಿ ಕೈಲಾಸದಿಂದ ಇಲ್ಲಿಗೆ ಬರುತ್ತಾರೆ. ನಂತರದ ಸನ್ನಿವೇಶಗಳೇ ಪ್ರೇಕ್ಷಕರಿಗೆ ಮನರಂಜನೆ ಕೊಡುತ್ತವೆ ಎನ್ನುತ್ತರೆ ನಿರ್ದೇಶಕ ಬಂಗಾರೇಶ್.

ನವೀನ್ ಕೃಷ್ಣ, ರೂಪಶ್ರೀ, ಚೇತನ್, ವಿಜಯ್ ಕುಮಾರ್, ಉಮೇಶ್ ಸೇರಿದಂತೆ ಇತರೆ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅನುಭವಿ ನಟ ಶ್ರೀನಿವಾಸ್ ಮೂರ್ತಿ ಈ ಹಿಂದೆ ಆರೇಳು ಶಿವನ ಪಾತ್ರದಲ್ಲಿ ಅಭಿನಯಿಸಿದ್ದರಂತೆ ಹಾಗಾಗಿ ಈ ಚಿತ್ರದಲ್ಲಿ ನಟಿಸುವುದು ಕಷ್ಟಕರವಾಗಲಿಲ್ಲವಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿವ ಪಾರ್ವತಿ, ಕನ್ನಡ ಸಿನಿಮಾ, ಚಿಂದೋಡಿ, ರಂಗ ಭೂಮಿ, ಶಂಭೋಶಂಕರ