'ಆಮಂತ್ರಣ' ಚಿತ್ರಕ್ಕೆ ಪ್ರಸಾದ್ ರಿರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಕಾರ್ಯ ಮುಗಿಸಲಾಗಿದೆ. ಈ ಚಿತ್ರವನ್ನು ಸಪ್ತಗಿರಿ ಫಿಲಂಸ್ನ ಕೆ. ಸುಜೇಂದ್ರ ನಿರ್ಮಿಸುತ್ತಿದ್ದಾರೆ. ಇದರ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವವರು ರಘುವರ್ಧನ್.
ಛಾಯಾಗ್ರಹಣ ಸುರೇಶ್ ಬಾಬು, ಸಂಗೀತ ನೀಲಾದ್ರಿ ಮತ್ತು ಸಂಕಲನವನ್ನು ಗಿರೀಶ್ ಕುಮಾರ್ ನೀಡಿದ್ದಾರೆ. ಧರ್ಮ ಕೀರ್ತಿರಾಜ್, ಬಿಯಾಂಕ ದೇಸಾಯಿ, ಹರ್ಷಿಕಾ ಪೂಣಚ್ಚ ಪ್ರಮುಖ ಪಾತ್ರದಲ್ಲಿದ್ದಾರೆ.