'ಕಳ್ಳರ ಸಂತೆ' ಚಿತ್ರತಂಡ ಪ್ರಾದೇಶಿಕ ಸೆನ್ಸಾರ್ ಮಂಡಳಿ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದೆ. ಗುರುವಾರ ಬೆಳಿಗ್ಗೆಯಿಂದಲೇ ಸೆನ್ಸಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ತಂಡ ಕುಳಿತುಬಿಟ್ಟಿದೆ.
MOKSHA
ಕ್ಷುಲ್ಲಕ ಕಾರಣಗಳನ್ನು ಮುಂದೊಡ್ಡಿ ಕತ್ತರಿ ಹಾಕಬೇಕು ಎಂದು ಪಟ್ಟು ಹಿಡಿದಿರುವ ಸೆನ್ಸಾರ್ ವಿರುದ್ಧ ಸಮರ ಸಾರಲಾಗಿದ್ದು, ಪ್ರಗತಿಪರ ಚಿಂತಕರು ಮತ್ತು ಉದ್ಯಮದ ಕೆಲವರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಚಿತ್ರದ ನಿರ್ದೇಶಕಿ ಸುಮನಾ ಕಿತ್ತೂರು ತಿಳಿಸಿದ್ದಾರೆ.
ಚಿತ್ರದಲ್ಲಿ ಗಣಿ, ಗಣಿಲೂಟಿ, ವಿಧಾನಸೌಧ, ಹೈಕೋರ್ಟ್, ಕಳ್ನ್ನನ್ಮಕ್ಳು ಮುಂತಾದ ಪದಗಳನ್ನು ಬಳಸಬಾರದಂತೆ. ಬದಲಿ ಪದಗಳನ್ನು ಸೇರಿಸಿ ಎನ್ನುತ್ತಿದ್ದಾರಂತೆ ಸೆನ್ಸಾರ್ ಅಧಿಕಾರಿಗಳು.
ಗಣಿ, ವಿಧಾನಸೌಧ ಮುಂತಾದ ಪದಗಳಿಗೆ ಕನ್ನಡದಲ್ಲಿ ಬೇರೆ ಪದಗಳಿಲ್ಲ. ಹಾಗಾಗಿ ನಮಗುಳಿದಿರುವ ದಾರಿ ಪ್ರತಿಭಟನೆ. ಅಬ್ಬಬ್ಬಾ, ನಮ್ಮಲ್ಲಿ ಸಿನಿಮಾ ಮಾಡುವುದು ತುಂಬಾ ಕಷ್ಟ ಎನ್ನುತ್ತಾರೆ ಸುಮನಾ.