ಯಶಸ್ವೀ ಚಿತ್ರಗಳಾದ 'ಮಠ' ಮತ್ತು 'ಎದ್ದೇಳು ಮಂಜುನಾಥ'ದ ನಿರ್ದೇಶಕ ಗುರು ಪ್ರಸಾದ್ ಮತ್ತೊಂದು ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ನಾಮಕರಣ ಮಾಡದ ಈ ಚಿತ್ರದಲ್ಲಿ ಕೋಮಲ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಸುರೇಶ್ ನಿರ್ಮಾಣ ಮಾಡುತ್ತಿದ್ದಾರೆ.
75 ವರ್ಷಗಳಲ್ಲಿ ಇದುವರೆಗೂ ಬಂದಿರದಂತಹ ಹಾಗೂ ಈಗ ಬರಲೇಬೇಕಾದಂತಹ ಕತೆಯನ್ನು ಬಿಂಬಿಸಲು ಹೊರಟಿದ್ದಾರಂತೆ ಗುರು. ಅವರನ್ನು ಹತ್ತಿರದಿಂದ ಬಲ್ಲವರು 'ಯಾವಾಗಲೂ ಈತ ಹೀಗೆ' ಎನ್ನುತ್ತಿದ್ದಾರಂತೆ. 'ಎದ್ದೇಳು ಮಂಜುನಾಥಳಿನ ಮೂಲಕ ಜಗ್ಗೇಶ್ಗೆ ಒಳ್ಳೆಯ ಇಮೇಜ್ ನೀಡಿದ್ದ ಗುರು ಈ ಭಾರಿ ತಮ್ಮ ಕೋಮಲ್ ಗಾಗಿ ಎನು ಕತೆ ತಂದಿದ್ದಾರೋ ಏನೋ?