ಈ ಹಿಂದೆ ಮೀಸೆ ಚಿಗುರಿದಾಗ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ತರುಣ್ ತೇಜಸ್, ಅನಂತರ ಶಿಕ್ಷಣದ ಕಡೆಗೆ ಗಮನ ಕೊಟ್ಟು ಬಿಇ ಮುಗಿಸಿ, ಆಸ್ಟ್ತ್ರೇಲಿಯಾದಲ್ಲಿ ಎಂಬಿಎ ಮಾಡಿದ್ದಾರೆ. ಇನ್ಪೋಸಿಸ್ನಲ್ಲಿ ಉದ್ಯೋಗದಲ್ಲಿದ್ದ ಅವರಿಗೆ ಹಿಂದಿನ ದಿನಗಳ ನೆನಪು ಆಗಾಗ ಆವರಿಸಿಕೊಳ್ಳುತ್ತಿತ್ತು. ಅದೃಷ್ಟ ಎಂಬಂತೆ ತಮಿಳಿನ ಖ್ಯಾತ ನಿರ್ಮಾಪಕ ಕುಂಜುಮೋನ್ ಅವರಿಂದ ಕರೆ ಬಂದಾಗ ತೇಜಸ್ ಕೆಲಸಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದರು.
ಇದೀಗ ತಮಿಳಿನ ಎರಡು ಚಿತ್ರಗಳಲ್ಲಿ ತರುಣ್ ನಟಿಸುತ್ತಿದ್ದಾರೆ. ಈ ನಡುವೆ ಮಾತೃಭಾಷೆ ಕನ್ನಡವನ್ನು ಮರೆಯಲಾಗದ ಅವರು ಕೆ.ಮಂಜು ಅವರ ಚಿತ್ರಕ್ಕೂ ಸಹಿ ಮಾಡಿದ್ದಾರೆ. ಕನ್ನಡ ಮಾತನಾಡುವಾಗ ಸಿಗುವ ಖುಷಿಯೇ ಬೇರೆ ಎನ್ನುವ ಅವರಿಗೆ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸುವ ಆಸೆ ಇದೆಯಂತೆ.