ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಲಯಾಳಂನ ಅವಿನಾಶ್ ನಿರ್ದೇಶನದಲ್ಲಿ ಉಪ್ಪಿ (Avinash Verma | Upendra | Kannada Cinema | Super)
ಸುದ್ದಿ/ಗಾಸಿಪ್
Bookmark and Share Feedback Print
 
NRB
ಉಪೇಂದ್ರ ಏನೇ ಮಾಡಿದರೂ ಡಿಫರೆಂಟ್ ಆಗಿ ಮಾಡುತ್ತಾರೆ ಎಂಬುದು ಗಾಂಧಿನಗರದ ಮಾತು. ಈಗಾಗಲೇ ಅವರು ಸೂಪರ್ ಅರ್ಥ ಧ್ವನಿಸುವ ಚಿಹ್ನೆಯೊಂದನ್ನೇ ಹೆಸರಿಸಿದ ಚಿತ್ರವನ್ನು ನಿರ್ದೇಶಿಸುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಆ ಚಿತ್ರದ ಚಿತ್ರೀಕರಣ ಆರಂಭವಾಗಿರುವ ಹೊತ್ತಿನಲ್ಲೇ ಇದೀಗ ಮತ್ತೊಂದು ಚಿತ್ರಕ್ಕೆ ಉಪ್ಪಿ ಕೈಹಾಕಿದ್ದಾರೆ. ಆದರೆ ಈ ಬಾರಿ ಉಪೇಂದ್ರ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿಲ್ಲ. ಬರೀ ನಟನೆ ಮಾತ್ರ ಉಪೇಂದ್ರರದ್ದು.

ಮಲೆಯಾಳಂ ನಿರ್ದೇಶಕ ಅವಿನಾಶ್ ವರ್ಮ ಅವರು ಈ ಮೂಲಕ ಕನ್ನಡದಲ್ಲೊಂದು ಚಿತ್ರ ಮಾಡಲಿದ್ದಾರೆ. ಜಾಕಿಯ ನಾಯಕಿ ಭಾವನಾರನ್ನು ತಿಲಕಂ ಚಿತ್ರದ ಮೂಲಕ ಮಲೆಯಾಳಂಗೆ ಪರಿಚಯಿಸಿದವರು ಇದೇ ಅವಿನಾಶ್. ಈಗ ಈ ಅವಿನಾಶ್ ಕನ್ನಡದಲ್ಲಿ ಚಿತ್ರವೊಂದನ್ನು ನಿರ್ದೇಶಿಸಿ, ನಿರ್ಮಿಸಲಿದ್ದಾರಂತೆ. ಅದಕ್ಕೆ ಉಪ್ಪಿಯನ್ನು ನಾಯಕನಾಗಿ ಆರಿಸಿದ್ದಾರೆ ಎಂಬ ಸುದ್ದಿ ಬಂದಿದೆ.

ನಾಯಕಿಯಾಗಿ ಗೂಳಿಯ ಮಮತಾ ಮೋಹನ್ ದಾಸ್ ನಟಿಸುತ್ತಿದ್ದಾರೆ. ಆ ದಿನಗಳು ಖ್ಯಾತಿಯ ಅತುಲ್ ಕುಲಕರ್ಣಿ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಇನ್ನೊಂದು ವಿಶೇಷವೆಂದರೆ ಚಿತ್ರ ಕೇವಲ ಒಂದು ತಿಂಗಳ ಅವಧಿಯಲ್ಲಿ ಮೂಡಿ ಬರಲಿದೆಯಂತೆ. ಅಂದ ಹಾಗೆ ಮಲಯಾಳಂಗೆ ಕನ್ನಡದ ಜೆಸ್ಸಿ ಗಿಫ್ಟ್ ಅವರನ್ನು ಪರಿಚಯಿಸಿದ್ದೂ ಕೂಡಾ ಇದೇ ಅವಿನಾಶ್. ಒಟ್ಟಿನಲ್ಲಿ ಅವಿನಾಶ್ ಮಲೆಯಾಳಂ ಮತ್ತು ಕನ್ನಡ ಚಿತ್ರರಂಗದ ಕೊಂಡಿಯಾಗಿರುವುದಂತೂ ಸುಳ್ಳಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅವಿನಾ್ ವರ್ಮಾ, ಉಪೇಂದ್ರ, ಕನ್ನಡ ಸಿನಿಮಾ, ಸೂಪರ್