ಚುಂಬನದ ಫೋಟೋಗಳನ್ನು ಪ್ರಸಾರ ಮಾಡಿರುವ ಬಗ್ಗೆ ಅಮೂಲ್ಯ ತೀವ್ರ ನೊಂದಿದ್ದಾರೆ. ಹೀಗೆ ಮುಂದುವರಿದರೆ ಖಂಡಿತಾ ತಾನು ಚಿತ್ರರಂಗಕ್ಕೆ ವಿದಾಯ ಹೇಳುವ ನಿರ್ಧಾರ ತೆಗೆದುಕೊಂಡೇನು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಾರನ್ನೋ ಬಲಿಪಶುಗಳನ್ನಾಗಿಸಲು ನಮ್ಮನ್ನು ಆಯುಧವಾಗಿ ಬಳಸಿದ್ದಾರೆ. ಇಂಥ ಕೀಳು ಚಟುವಟಿಕೆಗಳಲ್ಲಿ ಭಾಗವಹಿಸಿ ನನಗೆ ದುಡ್ಡು ಮಾಡುವ ಹಂಬಲವಿಲ್ಲ. ದುಡ್ಡು ಮಾಡಲು ಅಥವಾ ಶೋಕಿ ಮಾಡುವ ಆಸೆಯಿಂದ ನಾನು ಖಂಡಿತಾ ಚಿತ್ರರಂಗಕ್ಕೆ ಬಂದಿಲ್ಲ. ನಾನು ಉತ್ತಮ ಕುಟುಂಬದಿಂದ ಬಂದವಳು. ನನ್ನ ಬಗ್ಗೆ ಇಂಥ ಕೀಳು ಅಪಪ್ರಚಾರ ಮಾಡಿದರೆ ಖಂಡಿತವಾಗಿಯೂ ನಾನು ಸದ್ಯ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿ ನಂತರ ಚಿತ್ರರಂಗಕ್ಕೆ ವಿದಾಯ ಹೇಳುತ್ತೇನೆ ಎಂದರು ನೊಂದ ಅಮೂಲ್ಯ.
MOKSHA
ಸಿನಿಮಾ ರಂಗದಲ್ಲಿ ಇಂದು ಹೊಸದಾಗಿ ಬೆಳೆಯುತ್ತಿರುವ ಹೆಣ್ಣು ಮಕ್ಕಳ ಜೀವನಕ್ಕೆ ಮಸಿ ಬಳಿಯುವ ಕಾರ್ಯ ಇಲ್ಲಿ ಮಾಡಿದ್ದಾರೆ. ಈ ಚಿತ್ರರಂಗದಲ್ಲಿ ಭದ್ರತೆ ಅನ್ನೋದೇ ಇಲ್ಲ. ಇಷ್ಟ ಬಂದಂತೆ ಒಬ್ಬರನ್ನು ಮತ್ತೊಬ್ಬರು ಅಪಪ್ರಚಾರ ಮಾಡುತ್ತಾರೆ ಎಂದು ಅಮೂಲ್ಯ ಅಭಿಪ್ರಾಯ ಪಟ್ಟರು.
ಚುಂಬಿಸಿದರೆ ಎರಡು ಸಿನೆಮಾ ಆಫರ್?: ಗಾಂಧಿನಗರಿಯಲ್ಲಿ ಇದೀಗ ಗಿರಕಿ ಹೊಡೆಯುವ ಸುದ್ದಿಯೆಂದರೆ, ಅಮೂಲ್ಯರಿಗೆ ರತ್ನಜ ತನ್ನನ್ನು ಚುಂಬಿಸಿದರೆ ಎರಡು ಮುಂದಿನ ಚಿತ್ರಗಳಲ್ಲಿ ನಾಯಕಿಯಾಗಿ ಆಯ್ಕೆ ಮಾಡುತ್ತೇನೆ ಎಂದು ಅಮೂಲ್ಯರಿಗೆ ಆಫರ್ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಮೂಲ್ಯ ಮಾತ್ರ ಇದನ್ನು ತಳ್ಳಿ ಹಾಕಿದ್ದು, ಇಂಥ ಕೀಳು ಆಫರ್ಗಳಿಗೆಲ್ಲ ನಾನು ಬಗ್ಗುವವಳಲ್ಲ ಎಂದಿದ್ದಾರೆ.
ಜೊತೆಗೆ ಇನ್ನೂ ಕೆಲವರು ಅಮೂಲ್ಯರೊಂದಿಗೆ ಚುಂಬಿಸಿರುವ ಫೋಟೋಗಳು ಇದ್ದುದು ಸ್ವತಃ ರತ್ನಜ ಬಳಿಯಲ್ಲೇ ಇತ್ತು. ಆದರೆ ಅದನ್ನು ಯಾರೋ ಹ್ಯಾಕ್ ಮಾಡಿದ್ದು, ಆ ಮೂಲಕ ರತ್ನಜರಿಗೆ ದುಡ್ಡು ನೀಡುವಂತೆ ಬ್ಲ್ಯಾಕ್ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂಬ ಗುಲ್ಲು ಈಗ ಗಾಂಧಿನಗರಿಯ್ಲಲಿ ಹಬ್ಬಿದೆ.
ಆದರೆ ಅಮೂಲ್ಯ ಹಾಗೂ ತಾಯಿ ವಿಜಯಲಕ್ಷ್ಮಿ, ನಮ್ಮ ಮೇಲೆ ಬೇಕಂತಲೇ ಹೀಗೆ ಷಡ್ಯಂತ್ರ ರೂಪಿಸಿದ್ದಾರೆ. ಆದರೆ ಸತ್ಯ ಯಾವತ್ತೂ ಹೊರ ಬಂದೇ ಬರುತ್ತದೆ ಎಂದಿದ್ದಾರೆ.