ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪಂಕಜ್‌ಗಾಗಿ ಎಸ್.ನಾರಾಯಣ್ ಮತ್ತೊಂದು ಚಿತ್ರ! (Pankaj | S. Narayan | Veeru | Cheluvina Chilipili)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಮೂರು ಚಿತ್ರಗಳಲ್ಲಿ ನಟಿಸಿ ಸೋತರೂ ಪಂಕಜ್ ಪಟ್ಟು ಬಿಟ್ಟಿಲ್ಲ. ಸದ್ದಿಲ್ಲದೆ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದ ಹಾಗೆ, ಇವರು ಮತ್ತೆ ನಟಿಸುತ್ತಿರೋದು ಯಾರ ಚಿತ್ರದಲ್ಲಿ ಅಂದುಕೊಂಡಿರಾ? ಇನ್ಯಾರ ಚಿತ್ರದಲ್ಲಿ ಹೇಳಿ..! ತಮ್ಮ ಅಪ್ಪ ನಟ, ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ್ ಚಿತ್ರದಲ್ಲಿ!

ಹೌದು. ಅಪ್ಪ ಮಗ ಸದ್ದಿಲ್ಲದೆ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಆ ಮೂಲಕ ಎಸ್. ನಾರಾಯಣ್ ತಮ್ಮ ಮಗನ ಮೋಹದಿಂದ ಇನ್ನೂ ಹೊರ ಬಂದಿಲ್ಲವೆಂಬುದನ್ನು ಸಾಬೀತು ಪಡಿಸಿದ್ದಾರೆ. ಮಗನಿಗಾಗಿ ಮಾಡಿದ ಮೂರು ಚಿತ್ರಗಳಲ್ಲಿ ಸೋತರೂ ಎಸ್. ನಾರಾಯಣ್ ಮರಳಿ ಯತ್ನವ ಮಾಡು ಎಂಬ ಸೂತ್ರಕ್ಕೆ ಕಟ್ಟು ಬಿದ್ದಿದ್ದಾರೆ.

ವಿಶೇಷವೆಂದರೆ ಈ ಚಿತ್ರಕ್ಕಾಗಲೇ ನಾಯಕಿ, ನಟ, ತಂತ್ರಜ್ಞರೆಲ್ಲರ ಆಯ್ಕೆಯೂ ನಡೆದು ಚಿತ್ರದ ಕೆಲಸ ಕಾರ್ಯಗಳೆಲ್ಲ ಸದ್ದಿಲ್ಲದೆಯೇ ನಡೆದಿದೆ. ಆ ಮೂಲಕ ನಾರಾಯಣ್ ಪ್ರೇಕ್ಷಕರಿಗೊಂದು ಸರ್‌ಪ್ರೈಸ್ ನೀಡಲು ಚಿಂತನೆ ನಡೆಸಿದ್ದಾರೆ. ಸದ್ಯ ಎಸ್. ನಾರಾಯಣ್ ವೀರ ಪರಂಪರೆ ಚಿತ್ರವನ್ನು ಬಹುತೇಕ ಮುಗಿಸಿದ್ದು, ಶೀಘ್ರದಲ್ಲೇ ತಮ್ಮ ಮಗನ ಈ ಹೆಸರಿಡದ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಅಂದಹಾಗೆ ಈ ಚಿತ್ರಕ್ಕೆ ನಾಯಕಿಯಾಗಿ ಮಲಯಾಳಂ ಬೆಡಗಿ ಓವಿಯಾ ಆಯ್ಕೆಯಾಗಿದ್ದಾರೆ. ಈಗಾಗಲೇ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಮಲೇಷಿಯಾ ಹಾಗೂ ಶ್ರೀಲಂಕಾಗಳಲ್ಲಿ ನಡೆದಿದೆ. ವೀರ ಪರಂಪರೆ ಚಿತ್ರಕ್ಕಾಗಿ ಮಲೇಷಿಯಾಕ್ಕೆ ತೆರಳಿದ ಸಂದರ್ಭವೇ ಎಸ್. ನಾರಾಯಣ್ ತಮ್ಮ ಮಗನ ಈ ಚಿತ್ರದ ಹಾಡಿನ ಶೂಟಿಂಗ್ ಕೂಡಾ ಮುಗಿಸಿ ಬಂದಿದ್ದು ವಿಶೇಷ.

ಈಗಿನ್ನೂ ಮೊದಲ ವರ್ಷದ ಪದವಿ ಓದುತ್ತಿರುವ ಪಂಕಜ್ ಅಪ್ಪನ ಸಾರಥ್ಯದಲ್ಲಿ ಮೂರು ಚಿತ್ರ ಮಾಡಿದ್ದರೂ ಮೂರರಲ್ಲೂ ಸೋತಿದ್ದರು. ಮೊದಲ ಚಿತ್ರ 'ವೀರು'ನಲ್ಲಿ ಪಂಕಜ್ ನಟನೆಗೆ ಉತ್ತಮ ಪ್ರಶಂಸೆ ಬಂದರೂ ಚಿತ್ರ ಕಲಾತ್ಮಕಾಗಿತ್ತು. ಹಾಗಾಗಿ ಬಾಕ್ಸ್ ಆಫೀಸಿನಲ್ಲಿ ಗೆಲ್ಲಲಿಲ್ಲ. ನಂತರ ನಾಯಕನಾಗಿ ಎಂಟ್ರಿ ಕೊಟ್ಟ ಚೈತ್ರದ ಚಂದ್ರಮ ಹಾಗೂ ಚೆಲುವಿನ ಚಿಲಿಪಿಲಿ ಚಿತ್ರಗಳೆರಡೂ ಸೋತಿದ್ದವು. ಇದೀಗ ಮತ್ತೆ ಅಗ್ನಿ ಪರೀಕ್ಷೆಗಿಳಿದಿರುವ ಅಪ್ಪನ ಪ್ರಯತ್ನಕ್ಕೆ ಮಗ ಫಲ ನೀಡುತ್ತಾನಾ ಅನ್ನೋದನ್ನು ಕಾಲವೇ ಉತ್ತರಿಸಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಂಕಜ್, ಎಸ್ ನಾರಾಯಣ್, ಚೈತ್ರದ ಚಂದ್ರಮ, ಚೆಲುವಿನ ಚಿಲಿಪಿಲಿ