ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾನು ಸತ್ತಿಲ್ಲ ಕಣ್ರೀ, ಎಲ್ಲಾ ಸುಳ್ಳು ಸುದ್ದಿ: ಅಂಬರೀಷ್ ಸ್ಪಷ್ಟನೆ (Ambarish | Kannada actor | Karnataka | Mandya)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಅಂಬರೀಷ್ ಅಮೋಘ ನಾಲ್ಕನೇ ಬಾರಿ ನಿಧನರಾಗಿದ್ದಾರೆ! ಹೌದು, ಈ ಹಿಂದೆ ಮೂರು ಬಾರಿ ಸತ್ತಾಗಲೂ ಎದ್ದು ಬಂದಿದ್ದ ಕಲಿಯುಗದ ಕರ್ಣ ಖ್ಯಾತಿಯ ಮಂಡ್ಯದ ಗಂಡು ನಾಲ್ಕನೇ ಬಾರಿಯೂ ಎದ್ದು ಬಂದು ಸ್ಪಷ್ಟನೆ ನೀಡಿದ್ದಾರೆ.

ಇದು ನಡೆದಿರುವುದು ಗುರುವಾರ. ದೇಶಕ್ಕೆ ದೇಶವೇ ಅಯೋಧ್ಯೆ ತೀರ್ಪಿನಲ್ಲಿ ಮುಳುಗಿದ್ದಾಗ ಕಿಡಿಗೇಡಿಗಳು ಅಂಬರೀಷ್ ನಿಧನದ ವದಂತಿಯನ್ನು ಹಬ್ಬಿಸಿದ್ದರು.

ಸ್ವಲ್ಪವೇ ಹೊತ್ತಿನಲ್ಲಿ ಸಾಗರೋಪಾದಿಯಲ್ಲಿ ಅಂಬರೀಷ್ ಅಭಿಮಾನಿಗಳು ಅವರ ನಿವಾಸದ ಸುತ್ತ ನೆರೆಯಲಾರಂಭಿಸಿದರು. ಮೊಬೈಲುಗಳಲ್ಲೂ ಇಂತಹ ಸಂದೇಶಗಳು ಹರಿದಾಡಲಾರಂಭಿಸಿದವು. ಸಹಜವಾಗಿಯೇ ಕಿರಿಕಿರಿ ಅನುಭವಿಸಿದ ಅಂಬಿ, ನಾನು ಸತ್ತಿಲ್ಲ ಕಣ್ರೀ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಂತಹ ವದಂತಿಯನ್ನು ಯಾವ ಕಾರಣದಿಂದ ಹಬ್ಬಿಸಲಾಗಿತ್ತು ಮತ್ತು ಇದಕ್ಕೆ ಚಾಲನೆ ನೀಡಿದವರು ಯಾರು ಎನ್ನುವುದು ಕೊನೆಗೂ ನಿಗೂಢವಾಗಿಯೇ ಉಳಿದಿದೆ.

ಈ ಬಗ್ಗೆ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ ಅಂಬರೀಷ್, ಯಾರೋ ಕೆಲ್ಸ ಇಲ್ದೋರು ನನಗೆ ಹೃದಯಾಘಾತವಾಗಿದೆ, ಸತ್ತೋಗಿದ್ದೇನೆ ಅಂತ ವದಂತಿ ಹಬ್ಬಿಸ್ತಿದ್ದಾರೆ. ನಾನು ಸತ್ತಿಲ್ಲ. ನೋಡಿ, ಹೀಗಿದ್ದೇನೆ. ಯಾರೂ ಆತಂಕಪಡಬೇಕಾಗಿಲ್ಲ ಎಂದರು.

ನಿಮ್ಮ ಬಗ್ಗೆ ಈ ಹಿಂದೆಯೂ ಹಲವು ಬಾರಿ ಇಂತಹ ವದಂತಿಗಳನ್ನು ಹಬ್ಬಿಸಲಾಗಿತ್ತಲ್ಲವೇ? ಇದರಿಂದ ನಿಮ್ಮ ಆಯುಷ್ಯ ಹೆಚ್ಚಬಹುದು, ಏನಂತೀರಾ ಎಂದು ಅಂಬಿಯಲ್ಲಿ ಮರು ಪ್ರಶ್ನೆ ಹಾಕಿದರೆ, ಬಿಡಿ. ಅಭಿಮಾನಿಗಳ ಅಂತಹ ಆಶೀರ್ವಾದ ಇದ್ದೇ ಇರುತ್ತದೆ ಎಂದು ನಕ್ಕು ಪ್ರಸಂಗವನ್ನು ತೇಲಿಸಿಬಿಟ್ಟರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಂಬರೀಷ್, ಕನ್ನಡ ನಟ, ಕರ್ನಾಟಕ, ಮಂಡ್ಯ