ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚೈತ್ರದ ಪ್ರೇಮಾಂಜಲಿಯ ರಘುವೀರ್ ಆಟೋ ಚಾಲಕ! (Chaithrada Premanjali | Raghuveer | Kannada Cinema | Uyyale)
ಸುದ್ದಿ/ಗಾಸಿಪ್
Bookmark and Share Feedback Print
 
ಚೈತ್ರದ ಪ್ರೇಮಾಂಜಲಿ ಚಿತ್ರದ ನಂತರ ಸಾಕಷ್ಟು ಹೆಸರು ಮಾಡಿದ್ದ ನಟ ರಘುವೀರ್, ನಂತರದ ದಿನಗಳಲ್ಲಿ ಕಾಣೆಯಾಗಿ ಹೋಗಿದ್ದರು. ಬಹುದಿನದ ನಂತರ ಕಾಣಿಸಿಕೊಂಡಿರುವ ರಘುವೀರ್ ಆಟೊ ಚಾಲಕರಾಗಿದ್ದಾರೆ.

ಇದೇನು ನಟನೊಬ್ಬ ಈ ಸ್ಥಿತಿಗೆ ಬಂದು ಬಿಟ್ಟರಾ, ಜೀವನ ನಿರ್ವಹಣೆಗೆ ಆಟೊ ಓಡಿಸುತ್ತಿದ್ದಾರಾ? ಅಂತ ಗಾಬರಿ ಬೀಳಬೇಡಿ. ಇದು ಚಿತ್ರದಲ್ಲಿ ಮಾತ್ರ. ಈಗಾಗಲೇ ಆಟೊ ಚಾಲಕರ ಪಾತ್ರ ಮಾಡುವ ಕಾರ್ಯವನ್ನು ಕನ್ನಡದ ಹಲವು ನಟರು ಮಾಡಿದ್ದಾರೆ. ಅವರ ಪಟ್ಟಿಗೆ ಈಗ ರಘುವೀರ್ ಹೊಸದಾಗಿ ಸೇರ್ಪಡೆ ಆಗಿದ್ದಾರೆ.

ಹೊಸ ಚಿತ್ರ 'ಉಯ್ಯಾಲೆ'ಯಲ್ಲಿ ಇವರು ನಟಿಸುತ್ತಿದ್ದಾರೆ. ಹಳ್ಳಿ ಹಳ್ಳಿಗೂ ಇಂದು ರಿಯಲ್ ಎಸ್ಟೇಟ್ ಮಾಫಿಯಾ ಕಾಲಿರಿಸುತ್ತಿದೆ. ಆ ಸಂದರ್ಭದಲ್ಲಿ ರೈತರು ಭೂಮಿ ಕಳೆದುಕೊಳ್ಳುವ ಸ್ಥಿತಿಗೆ ಬಂದಾಗ ಅದನ್ನು ತಡೆದು ರೈತರಿಗೆ ನೆಮ್ಮದಿ ತಂದುಕೊಡುವ ಜನನಾಯಕರ ಕೆಲಸವನ್ನು ರಘುವೀರ್ ಈ ಚಿತ್ರದಲ್ಲಿ ಮಾಡಲಿದ್ದಾರೆ. ಈ ಚಿತ್ರದಲ್ಲಿ ರಘುವೀರ್ ಆಟಾ ಚಾಲಕನಾಗಿ ಪಾತ್ರ ನಿರ್ವಹಿಸಲಿದ್ದಾರೆ.

ಆಂದಹಾಗೆ, ಇದೊಂದು ಹೊಸಬರನ್ನು ಒಳಗೊಂಡ, ಹೊಸಬರೇ ನಿರ್ಮಿಸುತ್ತಿರುವ ಚಿತ್ರವಾಗಿದೆ. ಹಾಗಂತ ಚಿತ್ರದ ನಾಯಕ ಇವರಲ್ಲ. ಆದರೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕರಾಗಿ ಪ್ರಭು ಹಾಗೂ ನಾಯಕಿಯಾಗಿ ಶಿಲ್ಪಾ ಅಭಿನಯಿಸುತ್ತಿದ್ದಾರೆ. ಒಟ್ಟಾರೆ ಇದು ಕಾಮಿಡಿ ಕಂ ಜನರಿಗೆ ಸಂದೇಶ ನೀಡುವ ಗಂಭೀರ ಚಿತ್ರವಾಗಿದೆ ಎಂದು ಹೇಳಲಾಗಿದೆ.

ಚಿತ್ರದಲ್ಲಿ ನಾಯಕನ ತಂದೆಯಾಗಿ ರಮೇಶ್ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಟೆನ್ನಿಸ್ ಕೃಷ್ಣ, ದೊಡ್ಡಣ್ಣ, ಪದ್ಮಜಾರಾವ್ ಪ್ರಮುಖ ಪಾತ್ರದಲ್ಲಿ ಇದ್ದಾರೆ. ದಿನೇಶ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜಿ. ದೊರೆಸ್ವಾಮಿ ನಿರ್ಮಾಪಕರು. ರಿಕ್ಕಿ ಸಂಗೀತ ನೀಡಿದ್ದು, ಎಂ.ಆರ್. ಸೀನು ಛಾಯಾಗ್ರಹಣ ಚಿತ್ರಕ್ಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೈತ್ರದ ಪ್ರೇಮಾಂಜಲಿ, ಆಟೋ, ಉಯ್ಯಾಲೆ, ರಘುವೀರ್