ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅರೆನರೆತ ಅಪ್ಪನಿಗೆ ಮದುವೆಯಾಗಲು ಹುಡುಗಿ ಬೇಕಂತೆ! (Mayadhantha Male | Bhavana Rao | Ruthu | Veeresh)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಸಿನಿಮಾವೆಂದರೆ ಭಿನ್ನವಾಗಿರಬೇಕು ಎನ್ನುವುದು ನಿರ್ದೇಶಕ ವೀರೇಶ್ ದೊಡ್ಡಬಳ್ಳಾಪುರ ಮಾತು. ಅದೇ ನಿಟ್ಟಿನಲ್ಲಿ ಅವರು ತನ್ನ ಚಿತ್ರ 'ಮಾಯದಂಥ ಮಳೆ'ಯಲ್ಲಿ ಹೆಣ್ಮಕ್ಕಳ ಅಪ್ಪನಿಗೆ ಮದುವೆ ಮಾಡಿಸಲು ಹೊರಟಿದ್ದಾರೆ. ಪುತ್ರಿಯರಾದ ಭಾವನಾ ರಾವ್ ಮತ್ತು ಋತುವಿಗೆ ತಂದೆಗೆ ಹುಡುಗಿ ಹುಡುಕುವ ಕೆಲಸವನ್ನು ವಹಿಸಿದ್ದಾರೆ.

ಹೌದು, ಮೊನ್ನೆ ತಾನೇ ಬೆಂಗಳೂರಿನ ಮಲ್ಲೇಶ್ವರಂ ಬೀದಿಗಳಲ್ಲಿ ಮಗಳಂದಿರು ಅಪ್ಪನಿಗೆ ಹುಡುಗಿ ಹುಡುಕಿದ್ದಾರೆ. ಅರೆ ನರೆತ ಅಪ್ಪನಿಗೆ ಅದೆಂಥಾ ಹುಡುಗಿ ಬೇಕೆಂದು ಮಕ್ಕಳು ಹುಡುಕುತ್ತಿದ್ದಾರೆ ಎಂದರೆ ನಿರ್ದೇಶಕರು ಸುಮ್ಮನೆ ನಗುತ್ತಾರೆ.

ಗಂಗಾ ಪರಮೇಶ್ವರಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ನಿರ್ಮಾಪಕರು ಕೆರೆಮಲು ಬದ್ರಿ. ನಿರ್ದೇಶಕರು ಮತ್ತು ನಿರ್ಮಾಪಕರು ಸಮಾನ ಮನಸ್ಕರಾಗಿರುವುದರಿಂದ ಯಾವುದೇ ಸಮಸ್ಯೆ ಎದುರಾಗಿಲ್ಲವಂತೆ.

ಮೊದಲ ಬಾರಿ ನಿರ್ದೇಶನಕ್ಕೆ ಕೈ ಹಾಕಿರುವ ವೀರೇಶ್ ಸ್ವತಃ ಕಥೆ ಬರೆದಿದ್ದಾರೆ. ಚಿತ್ರಕಥೆ, ಸಂಭಾಷಣೆಯೂ ಅವರದ್ದೆ. ಎ.ಸಿ. ಮಹೇಂದ್ರನ್ ಕ್ಯಾಮರಾ ಹಿಡಿದಿದ್ದರೆ, ಕೆಂಪರಾಜು ಸಂಕಲನಕಾರರಾಗಿದ್ದಾರೆ.

ಮಾಯದಂಥ ಮಳೆಯಲ್ಲಿ ನೆನೆಯುತ್ತಿರುವವರು ರವಿಚೇತನ್, ಭಾವನಾ ರಾವ್, ರೂಪಿಕಾ, ಶರತ್ ಬಾಬು, ಶ್ರುತಿ, ಪ್ರಕಾಶ್ ಶೆಣೈ, ಸಿಹಿಕಹಿ ಚಂದ್ರು, ಪದ್ಮಜಾ ರಾವ್, ರೇಖಾ ಕುಮಾರ್, ಹೊನ್ನವಳ್ಳಿ ಕೃಷ್ಣ, ಸುಂದರಶ್ರೀ, ಋತು, ಮಿಮಿಕ್ರಿ ರಾಜಗೋಪಾಲ್ ಮುಂತಾದವರು.

ಮ್ಯೂಸಿಕ್ ಮೋಹನ್ ಅವರ ಸಂಗೀತಕ್ಕೆ ಹಾಡುಗಳನ್ನು ಪೋಣಿಸಿರುವವರು ಕವಿರಾಜ್, ಕಲ್ಯಾಣ್, ವಿ. ನಾಗೇಂದ್ರ ಪ್ರಸಾದ್ ಮತ್ತು ಮಂಜುನಾಥ ರಾವ್. ಇದನ್ನು ಸುಶ್ರಾವ್ಯವಾಗಿ ಹಾಡಿರುವವರು ಸೋನು ನಿಗಂ, ಶ್ರೇಯಾ ಘೋಷಾಲ್, ಹೇಮಂತ್, ಚಿತ್ರಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾಯದಂಥ ಮಳೆ, ಭಾವನಾ ರಾವ್, ಋತು, ವೀರೇಶ್