ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಿಂಗಾಪುರದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಶಿವಣ್ಣ, ದಿಗಂತ್, ಪೂಜಾ (Kannada Rajyothsava | Shivaraj Kumar | Diganth | Pooja Gandhi)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕನ್ನಡ ರಾಜ್ಯೋತ್ಸವ ನವೆಂಬರ್ 1 ಎನ್ನುವುದು ಹೌದಾದರೂ, ವಿದೇಶಗಳಲ್ಲಿ ಇದರ ಸಂಭ್ರಮ ವರ್ಷಾಂತ್ಯದವರೆಗೂ ನಡೆಯುತ್ತಿರುತ್ತದೆ. ಕಾರಣಾಂತರಗಳಿಂದ ನಿಗದಿತ ದಿನದಂದು ನಡೆಸಲಾಗದೆ, ನಂತರ ಯಾವುದಾದರೊಂದು ದಿನ ನಡೆಸಲಾಗುತ್ತದೆ.

ಅದರಂತೆ ಈ ಬಾರಿ ಸಿಂಗಾಪುರದಲ್ಲಿ ಕನ್ನಡ ರಾಜ್ಯೋತ್ಸವ ನವೆಂಬರ್ 29ರಂದು ನಡೆಯಲಿದೆ. ಕನ್ನಡ ಚಿತ್ರ ನಟ-ನಟಿಯರ ದಂಡೇ ಇದಕ್ಕೆ ಹೋಗುತ್ತಿರುವುದು ವಿಶೇಷ. ಇದರ ಟೀಮ್ ಲೀಡರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.

ಶಿವಣ್ಣ ಜತೆ ಚಿರಂಜೀವಿ ಸರ್ಜಾ, ದಿಗಂತ್, ಪೂಜಾ ಗಾಂಧಿ, ಐಂದ್ರಿತಾ ರೇ, ಯಶ್, ಲೂಸ್ ಮಾದ ಯೋಗೀಶ್, ನೀತು ಮುಂತಾದವರು ಕೂಡ ಸಿಂಗಾಪುರ ವಿಮಾನ ಹತ್ತಲಿದ್ದಾರೆ.

ಅಂದ ಹಾಗೆ ಇವರೆಲ್ಲರೂ ಸುಮ್ಮನೆ ಮುಖ ತೋರಿಸಿ ಬರಲು ಸಿಂಗಾಪುರಕ್ಕೆ ಹೋಗುತ್ತಿಲ್ಲ. ಅಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈಗಾಗಲೇ ಸಾಕಷ್ಟು ಪೂರ್ವ ಸಿದ್ಧತೆಗಳನ್ನು ನಡೆಸಲಾಗಿದೆಯಂತೆ.

ಐಂದ್ರಿತಾ ರೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶನ ನೀಡಿದವರು. ಯಶ್ ಡ್ಯಾನ್ಸ್ ಬಗ್ಗೆ ಮಾತನಾಡಬೇಕಾಗಿಲ್ಲ. ಈ ವಿಚಾರದಲ್ಲಿ ಚಿರಂಜೀವಿ ಸರ್ಜಾ ಕೂಡ ಹಿಂದಿಲ್ಲ. ಪೂಜಾ, ಯೋಗಿ ಮುಂತಾದವರು ತಮ್ಮನ್ನು ಪ್ರಯೋಗಕ್ಕೊಳಪಡಿಸಲಿದ್ದಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ರಾಜ್ಯೋತ್ಸವ, ಶಿವರಾಜ್ ಕುಮಾರ್, ದಿಗಂತ್, ಪೂಜಾ ಗಾಂಧಿ