ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಾರೆ ಕೆಲಸವಲ್ಲ, ಆದರೆ ಮೇಸ್ತ್ರಿ; ಇದು ಬಾಲು ಹೊಸ ಗೆಟಪ್ (Mestri | Anandram | Balu | Rani)
ಸುದ್ದಿ/ಗಾಸಿಪ್
Bookmark and Share Feedback Print
 
'ಅನು' ಚಿತ್ರದಲ್ಲಿ ಪೂಜಾ ಗಾಂಧಿ ಜೊತೆ 'ಗುಲಾಬಿ ಮಂಜ'ನಾಗಿ ನಟಿಸಿದ್ದ ಬಾಲು ಈಗ 'ಮೇಸ್ತ್ತಿ'. ಮೇಸ್ತ್ತಿ ಎಂದರೆ ಗಾರೆ ಕೆಲಸ ಮಾಡುವವನಲ್ಲ. ಸಮಾಜದ ಕಸವನ್ನು ತೊಡೆದು ಹಾಕುವ ಆಕ್ಷನ್ ಮೇಸ್ತ್ತ್ರಿ.

ಈ ಚಿತ್ರದಲ್ಲಿ ಬಾಲು ನಾಯಕ ಮಾತ್ರವಲ್ಲ, ನಿರ್ಮಾಪಕ ಕೂಡ. ಅನು ಚಿತ್ರದ ಬೆನ್ನಿಗೆ ಸೆಟ್ಟೇರಬೇಕಿದ್ದ ಚಿತ್ರ ಕೊಂಚ ತಡವಾಗಿ ಹಲವಾರು ಕಾರಣಗಳಿಂದ ಡಿಸೆಂಬರ್ 9ರ ಗುರುವಾರ ಸೆಟ್ಟೇರಿದೆ.

ಭ್ರಷ್ಟಾಚಾರದ ಆಗರವಾಗಿರುವ ಸಮಾಜದ ವಿರುದ್ಧ ಸಿಡಿದೇಳುವ, ಬಡಿದಾಡುವ ಮೇಸ್ತ್ತ್ರಿಯ ಪಾತ್ರ ಬಾಲು ನಿಭಾಯಿಸುತ್ತಿದ್ದಾರೆ. ಇಲ್ಲಿ ಪ್ರೀತಿ, ಪ್ರೇಮ, ಸೆಂಟಿಮೆಂಟ್ ಎಲ್ಲವೂ ಇದೆ. ಆದರೆ ಮಚ್ಚು, ಲಾಂಗುಗಳ ಆರ್ಭಟ ಕಡಿಮೆ ಇರುತ್ತದೆ ಎಂದಿದ್ದಾರೆ ಬಾಲು.

ಆನಂದ್‌ರಾಮ್ ಈ ಚಿತ್ರದ ನಿರ್ದೇಶಕರು. ಯೋಗೀಶ್ ನಾಯಕನಾಗಿ ಮಿಂಚಿದ್ದ 'ಜಿಂಕೆ ಮರೀನಾ...' ಹಾಡನ್ನು ಬರೆದವರು ಎಂದರೆ ತಕ್ಷಣಕ್ಕೆ ನೆನಪಿಗೆ ಬರಬಹುದು. ಆದರೆ, ಈ ಚಿತ್ರದಿಂದ ಅವರ ಹೆಸರು ಎಸ್. ರಾಜ್‌ಕಿರಣ್ ಎಂದು ಬದಲಾಗಿದೆ.

'ಪೆರೋಲ್' ಚಿತ್ರದ ರಾಣಿ ಇದರ ನಾಯಕಿ. 'ದುನಿಯಾ' ರಶ್ಮಿಗೂ ಇಲ್ಲೊಂದು ಅವಕಾಶವಿದೆ. ಮಲಯಾಳಂ ತಂಬನ್ ವಿಲನ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಂಗೀತ ಜಿ.ಆರ್. ಶಂಕರ್, ಸಾಹಿತ್ಯ ರಾಜ್‌ಕಿರಣ್, ಸುಧೀರ್‌ರಾಜ್ ಹಾಗೂ ಹೇಮಂತ್ ದಾಸ್ ಅವರದು. ಬೆಂಗಳೂರು, ಮಂಗಳೂರು ಹಾಗೂ ಮುಂಬೈನಲ್ಲಿ ಒಟ್ಟು 65 ದಿನಗಳ ಶೂಟಿಂಗ್ ಇಟ್ಟುಕೊಂಡಿದ್ದಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೇಸ್ತ್ರಿ, ಆನಂದರಾಮ್, ಬಾಲು, ರಾಣಿ, ಕನ್ನಡ ಸಿನಿಮಾ