ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರ್ದೇಶಕ ಔಟ್; ಮುಳುಗುತ್ತಿರುವ ದಿವಾಕರ್ 'ಹಡಗು' (Hadagu | Durga Prasad | Diwakar | Sangeetha Shetty)
ಸುದ್ದಿ/ಗಾಸಿಪ್
Bookmark and Share Feedback Print
 
ನಿರ್ದೇಶಕ ದುರ್ಗಪ್ರಸಾದ್ ಅವರ 'ಹಡಗು' ಚಿತ್ರದಿಂದ ಹೊರನಡೆದಿದ್ದಾರೆ. ಕಾರಣ ಸಂಭಾವನೆ ರೂಪದಲ್ಲಿ ನೀಡಿದ್ದ ಚೆಕ್ ಬೌನ್ಸ್ ಆಗಿರುವುದು.

ಚಿತ್ರದ ನಾಯಕ ಹಾಗೂ ಸಂಗೀತ ನಿರ್ದೇಶಕ ದಿವಾಕರ್ ಈ ಚಿತ್ರದ ನಿರ್ಮಾಣದ ಹೊಣೆಯನ್ನು ಹೊತ್ತಿದ್ದರು. ಇದುವರೆಗೆ ಅವರು ಚಿತ್ರದ ನಾಯಕಿ ಮತ್ತು ತಂತ್ರಜ್ಞರಿಗೆ ಮುಂಗಡ ಹಣವನ್ನೆ ಕೊಟ್ಟಿಲ್ಲ. ಕೊಟ್ಟ ಚೆಕ್ ಕೂಡ ಬೌನ್ಸ್ ಆಗಿದೆ. ಇದರಿಂದ ಬೇಸತ್ತ ಚಿತ್ರತಂಡ ನಿರ್ದೇಶಕರ ಮೇಲೆ ಒತ್ತಡ ಹೇರುತ್ತಿದೆಯಂತೆ.

ಈ ಕುರಿತು ದಿವಾಕರ್‌ಗೆ ನಿರ್ದೇಶಕ ದುರ್ಗಾಪ್ರಸಾದ್ ಫೋನ್ ಮಾಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲವಂತೆ. ಪರಿಣಾಮ ನಿರ್ದೇಶಕರೇ ಚಿತ್ರತಂಡದಿಂದ ವಾಕ್ಓಟ್ ಮಾಡಿದ್ದಾರೆ.

ಕಳೆದ ಡಿಸೆಂಬರ್ 6ರಂದು ಚಿತ್ರೀಕರಣ ಶುರು ಮಾಡುವುದಾಗಿ ಈ ಚಿತ್ರದ ನಿರ್ಮಾಣದ ಉಸ್ತುವಾರಿ ಹೊತ್ತಿದ್ದ ನಾಯಕ ಕಮ್ ಸಂಗೀತ ನಿರ್ದೇಶಕ ದಿವಾಕರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆದರೆ, ಇದುವರೆಗೆ ಶೂಟಿಂಗ್ ನಡೆದಿಲ್ಲ. ಹಾಗೊಂದು ವೇಳೆ ಚಿತ್ರೀಕರಣ ಶುರು ಮಾಡಿದರೂ ಚಿತ್ರ ಪೂರ್ಣಗೊಳಿಸುತ್ತಾರೆ ಎಂಬ ನಂಬಿಕೆ ನಿರ್ದೇಶಕರಿಗೇ ಇಲ್ಲ. ಹಾಗಾಗಿ 'ಹಡಗು' ಚಿತ್ರತಂಡದಿಂದ ಹೊರಬಂದಿದ್ದಾಗಿ ನಿರ್ದೇಶಕ ದುರ್ಗಾಪ್ರಸಾದ್ ಹೇಳಿಕೊಂಡಿದ್ದಾರೆ.

ಒಂದೂವರೆ ತಿಂಗಳಿನಿಂದ ದಿವಾಕರ್ ಬಳಿ ಕೆಲಸ ಮಾಡಿ, ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಎರಡು ಹಾಡುಗಳನ್ನು ಬರೆದ ದುರ್ಗಾಪ್ರಸಾದ್ ಅವರಿಗೆ ಮುಂಗಡ ಸಂಭಾವನೆ ಕೊಟ್ಟಿದ್ದು ಕೇವಲ 51 ರೂ.

ನನ್ನ ಮನೆಯಲ್ಲೇ ಕುಳಿತು ಚಿತ್ರಕಥೆ ಬರೆದಿದ್ದೆ. ಸ್ವಂತ ಜೇಬಿನಿಂದಲೇ 15 ಸಾವಿರ ರೂ. ಖರ್ಚು ಮಾಡಿದ್ದೇನೆ. ಆದರೆ, ಚಿತ್ರ ಪ್ರಾರಂಭಕ್ಕೆ ಮುನ್ನಾ ಯಾವುದೇ ಅಗ್ರಿಮೆಂಟ್ ಮಾಡಿಕೊಂಡಿಲ್ಲ. ಅದೇ ಆಗಿರುವ ಕೊರತೆ ಎಂದಿದ್ದಾರೆ ಅವರು.

ಸಂಗೀತಾ ಶೆಟ್ಟಿ 'ಹಡಗು' ಚಿತ್ರದ ನಾಯಕಿ, ಮತ್ತೊಬ್ಬ ನಾಯಕ ಕಿರಣ್ ಕುಮಾರ್. ಮಂಗಳೂರು ಬಂದರಿನಲ್ಲಿ ಪ್ರಾರಂಭಗೊಳ್ಳಬೇಕಿದ್ದ 'ಹಡಗು' ಶೂಟಿಂಗ್, ಚಿತ್ರತಂಡದೊಂದಿಗೆ ಸಮುದ್ರದಲ್ಲಿ ಮುಳುಗುವಂತೆ ಕಾಣುತ್ತಿದೆ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಡಗು, ದುರ್ಗಾ ಪ್ರಸಾದ್, ದಿವಾಕರ್, ಸಂಗೀತಾ ಶೆಟ್ಟಿ