ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮ್ಯಾ ಬೇಕೆಂದು 'ಸಿದ್ಲಿಂಗ'ನಾದ ಲೂಸ್‌ಮಾದ ಯೋಗೀಶ್ (Sidlingu | Yogish | Vijaya Prasad | Ramya)
ಲೂಸ್‌ಮಾದ ಯೋಗೀಶ್ ಕನಸುಗಳು ನನಸಾಗುವ ದಿನಗಳು ಮತ್ತಷ್ಟು ಹತ್ತಿರವಾಗಿವೆ. 'ಸಿದ್ಲಿಂಗು' ಎಂಬ ಹೆಸರಿನ, 'ರೋಹಿಣಿ ನಕ್ಷತ್ರ, ವೃಷಭ ರಾಶಿ' ಉಪ ಶೀರ್ಷಿಕೆ ಹೊಂದಿರುವ ಚಿತ್ರದ ಶೂಟಿಂಗ್ ಕೊನೆಗೂ ಆರಂಭವಾಗಿದೆ.

2010ರ ಅಕ್ಟೋಬರ್ ತಿಂಗಳಲ್ಲೇ ಮುಹೂರ್ತ ಮುಗಿಸಿಕೊಂಡಿದ್ದ 'ಸಿದ್ಲಿಂಗು' ಚಿತ್ರದಲ್ಲಿ ಲೂಸ್‌ಮಾದನ ಆರಾಧ್ಯ ದೇವತೆ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ನಾಯಕಿ. ಯೋಗೀಶ್ ಹೋಮ್ ಬ್ಯಾನರಿನಲ್ಲೇ ಚಿತ್ರವನ್ನು ನಿರ್ಮಿಸಲಾಗುತ್ತಿದೆ. 'ಸಿಲ್ಲಿಲಲ್ಲಿ', 'ಪಾಪಾ ಪಾಂಡು' ಖ್ಯಾತಿಯ ವಿಜಯ್ ಕುಮಾರ್ ನಿರ್ದೇಶಕರು.
PR

ಈಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಶ್ರೀನಗರ ಕಿಟ್ಟಿ ಜತೆಗಿನ 'ಹುಡುಗ್ರು' ಮುಗಿಸಿರುವ ಯೋಗೀಶ್, 'ಸಿದ್ಲಿಂಗು' ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಮದ್ದೂರಿನಲ್ಲಿ ಮೊದಲ ಹಂತದ ಶೂಟಿಂಗ್ ಸಮಾಪ್ತಿಗೊಂಡಿದೆ. ಇದೇ ಶುಕ್ರವಾರದಿಂದ ಎರಡನೇ ಹಂತದ ಚಿತ್ರೀಕರಣ ಆರಂಭ.

ಮುಂದಿನ ಚಿತ್ರೀಕರಣದಲ್ಲಿ ಯೋಗೀಶ್, ರಮ್ಯಾ, ಸುಮನ್ ರಂಗನಾಥ್, ಕೆ.ಸಿ. ಶ್ರೀಧರ್, ಶರಣ್, ರಂಗಾಯಣ ರಘು ಮತ್ತಿತರರು ಪಾಲ್ಗೊಳ್ಳಲಿದ್ದು, ಮಂಡ್ಯ, ಮದ್ದೂರು, ಕೆ.ಆರ್. ಪೇಟೆ, ಶಿವನ ಸಮುದ್ರ ಜಲಪಾತ ಮತ್ತು ಇತರೆಡೆ ನಡೆಯಲಿದೆ.

ಅನೂಪ್ ಸಿಳೀನ್ ಸಂಗೀತ, ಜ್ಞಾನ ಮೂರ್ತಿ ಛಾಯಾಗ್ರಣ, ಡಿಫೆರೆಂಟ್ ಡ್ಯಾನಿ ಸಾಹಸ ಚಿತ್ರಕ್ಕಿದೆ. ಯೋಗಿ ತಂದೆ ಟಿ.ಪಿ. ಸಿದ್ಧರಾಜು 'ಸಮಿ ಅಸೋಸಿಯೇಟ್ಸ್' ಬ್ಯಾನರಿನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಲೂಸ್‌ಮಾದ ಯೋಗೀಶ್ ಅವರದ್ದು ಈ ಚಿತ್ರದಲ್ಲಿ ಹಳ್ಳಿಯಿಂದ ಬಂದವನ ಪಾತ್ರವಂತೆ. ಮೊದಲಿನಿಂದಲೂ ಈ ಯೋಗೀಶ್ ರಮ್ಯಾರನ್ನು ಅದೆಷ್ಟು ಇಷ್ಟಪಡುತ್ತಿದ್ದರು ಎಂಬುದು ನಿಮಗೆಲ್ಲ ಗೊತ್ತೇ ಇದೆ. ಇದೇ ಎಳೆಯನ್ನು ಬಳಸಿಕೊಂಡು ಸಿನಿಮಾ ಮಾಡಲಾಗುತ್ತಿದೆ.

ಸುಮನ್ ರಂಗನಾಥ್‌ಗೆ ಎರಡನೇ ನಾಯಕಿಯ ಪಟ್ಟವೂ ಇಲ್ಲಿ ದಕ್ಕಿದೆ.
ಇವನ್ನೂ ಓದಿ