ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸ್ಯಾಂಡಲ್‌ ವುಡ್‌ನ ಭೀಮಾ ತೀರದಲ್ಲಿ ರೇಣುಕಾಚಾರ್ಯ ರೇಡ್! (Bheema theeradalli | Renukacharya | Vijay | Om Prakash Rao)
PR
ಶಾಸಕರಾದಾಗಿನಿಂದಲೂ ಒಂದಲ್ಲ ಒಂದು ಬಗೆಯ ಸುದ್ದಿಯಲ್ಲಿರುವ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವರ್ಣ ರಂಜಿತ ರಾಜಕಾರಣಿ, ಕರ್ನಾಟಕ ಅಬಕಾರಿ ಸಚಿವ ರೇಣುಕಾಚಾರ್ಯ ಇದೀಗ ಚಿತ್ರರಂಗ ಪ್ರವೇಶಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಬಣ್ಣದ ಲೋಕದ ಪ್ರಭಾವ ಮತ್ತು ಆಕರ್ಷಣೆಯೇ ಅಂಥದ್ದು. ಯಾವ ಯಾವ ಕ್ಷೇತ್ರದವರೋ ಬಂದು ಇಲ್ಲಿ ಬಣ್ಣ ಹಚ್ಚಿ ಹೋಗಿದ್ದಾರೆ. 'ಲಿಫ್ಟ್ ಕೊಡ್ಲಾ' ಚಿತ್ರದಲ್ಲಿ ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬಂದು ಹೋಗಿದ್ದರು. ಈ ಹಿಂದೆ ರಾಮಕೃಷ್ಣ ಹೆಗಡೆ ಕೂಡ ನಟಿಸಿದ್ದರು. ಇದೀಗ ಅಬಕಾರಿ ಸಚಿವ ರೇಣುಕಾಚಾರ್ಯ ಅವರ ಸರದಿ.

ಅಣಜಿ ನಾಗರಾಜ್ ನಿರ್ಮಿಸುತ್ತಿರುವ ಹಾಗೂ ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿರುವ ಚಿತ್ರ 'ಭೀಮಾ ತೀರದಲ್ಲಿ' ರೇಣುಕಾಚಾರ್ಯ ಪೊಲೀಸ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಉತ್ತರ ಕರ್ನಾಟಕದ ದಲಿತ ಹೋರಾಟಗಾರ ಚಂದಪ್ಪ ಹರಿಜನ ಅವರ ಜೀವನ ಕಥೆಯನ್ನಾಧರಿಸಿ ತಯಾರಾಗುತ್ತಿರುವ ಈ ಚಿತ್ರದಲ್ಲಿ 'ದುನಿಯಾ' ಖ್ಯಾತಿಯ ವಿಜಯ್ ಮುಖ್ಯ ಪಾತ್ರಕ್ಕೆ ಜೀವತುಂಬಲಿದ್ದಾರೆ. ಚಿತ್ರದ ನಾಯಕಿಯಾಗಿ ಪ್ರಣೀತ ಮತ್ತು ಪ್ರಜ್ವಲ್ ಪೂವಯ್ಯ ನಟಿಸಲಿದ್ದಾರೆ.

ಕಳೆದ ಸೋಮವಾರ ಯುಗಾದಿ ಹಬ್ಬದ ದಿನದಂದು ಜರುಗಿದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದ ರೇಣುಕಾಚಾರ್ಯ 'ಭೀಮಾ ತೀರದಲ್ಲಿ' ತಾನು ಅಭಿನಯಿಸಲಿರುವುದನ್ನು ದೃಢೀಕರಿಸಿದ್ದರು. ಮರುದಿನ ಮಂಗಳವಾರ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಆರಂಭಗೊಂಡ ಚಿತ್ರೀಕರಣದ ಮೊದಲ ಶಾಟ್‌ನಲ್ಲೇ ಸಚಿವ ರೇಣುಕಾಚಾರ್ಯ ನಟಿಸಿದರು.
ಇವನ್ನೂ ಓದಿ