ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಧಿಕಾ ಪಂಡಿತ್‌ ಮನಸ್ಸನ್ನು ಬರೆದ ಜಯಂತ್ ಕಾಯ್ಕಿಣಿ! (Radhika pandith | Jayanth kaikini | Moggina manasu | Hudugaru)
PR

ಮೊಗ್ಗಿನ ಮನಸ್ಸಿನ ಕನ್ನಡತಿ ರಾಧಿಕಾ ಪಂಡಿತ್ ನನಗೂ ಒಬ್ಬ ಗೆಳೆಯ ಬೇಕು ಎಂದಿದ್ದು ಎಲ್ಲರಿಗೂ ನೆನಪಿರಬೇಕು. ಮತ್ತೆ ಅವನು ಹೇಗೆಲ್ಲಾ ಪ್ರೀತಿಸ್ಬೇಕು, ಏನೇನು ಮಾಡ್ಬೇಕು, ಏನೇನು ಮಾಡ್ಬಾರ್ದು ಎಂಬ ಶರತ್ತು ಬದ್ದ ನಿಯಮನ್ನು 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಹಾಡಿಕುಣಿದಿದ್ದರು. ಆ ನಂತರ ಗೊತ್ತಾದದ್ದು ಅದು ಕೇವಲ ರಾಧಿಕಾ ಪಂಡಿತ್ ಅವರ ನಿಯಮವಲ್ಲ, ಆ ವಯಸ್ಸಿನ ಹೆಣ್ಣು ಮಕ್ಕಳ ನಿಯಮವೇ ಅಂತದೆಂದು.

ಆದರೆ ಏಕೋ ಆ ವಯಸ್ಸಿನ ಹೆಣ್ಣು ಮಕ್ಕಳು ಹೇಗಿರಬೇಕೆಂದು ಹೇಳಲು ಮರೆತುಬಿಟ್ಟರು. ಮರೆತದ್ದು ರಾಧಿಕಾ ಪಂಡಿತ್ ಅಲ್ಲ, ಆ ಗೀತೆ ರಚನೆಕಾರ ಜಯಂತ್ ಕಾಯ್ಕಿಣಿ. ಏನೇ ಇರಲಿ ಕಾಯ್ಕಿಣಿ ಅವರು ನಿಜವಾಗಲೂ ರಾಧಿಕಾ ಪಂಡಿತ್ ಅವರ ಮನಸ್ಸಿನ ಆಕಾಂಕ್ಷೆಯನ್ನು ಬರೆದಿದ್ದಾರಂತೆ. ಹಾಗಂತ ಸ್ವತಃ ರಾಧಿಕಾ ಪಂಡಿತ್ ಹೇಳಿಕೊಂಡಿದ್ದಾರೆ.

ನೀವು ಕೇಳಿರಬಹುದು 'ಮಳೆ ಬರುವಾ ಹಾಗಿದೆ..' ಗೀತೆ. ಅದನ್ನು ಪೂರ್ತಿ ಕೇಳಿ. ಅದರಲ್ಲಿ ಜಯಂತ್ ಕಾಯ್ಕಿಣಿ ಅವರು ಏನೇನೆಲ್ಲ ಬರೆದಿದ್ದಾರೊ, ಅದೆಲ್ಲ ನನ್ನ ಪ್ರೀತಿಸುವ ಹುಡುಗನಿಗೆ ಇರಬೇಕು ಎಂದಿದ್ದಾರೆ ರಾಧಿಕಾ ಪಂಡಿತ್.
ಇವನ್ನೂ ಓದಿ