ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜೂನ್ ಮೊದಲ ವಾರದಲ್ಲಿ 'ದುಷ್ಟ' ತೆರೆಗೆ (Dushta | S.Narayan | pankaj | Surabhi)
PR
ಮುಂದಿನ ತಿಂಗಳ ಮೊದಲ ವಾರ ನಾನು ಪ್ರೇಕ್ಷಕರನ್ನೆಲ್ಲಾ ಭದ್ರಾವತಿಗೆ ಕರೆದೊಯ್ಯುತ್ತೇನೆ ಎಂದು ಖ್ಯಾತ ನಿರ್ಮಾಪಕ-ನಿರ್ದೇಶಕ ಎಸ್.ನಾರಾಯಣ್ ಹೇಳುತ್ತಿದ್ದಾರೆ. ಜೂನ್ ಮೊದಲ ವಾರದಲ್ಲಿ ಅವರ 'ದುಷ್ಟ' ಚಿತ್ರ ಬಿಡುಗಡೆಯಾಗಲಿದೆ ಎಂಬುದು ಅವರ ಮಾತಿನ ಅರ್ಥ. ಚಿತ್ರ ನೋಡುವ ಪ್ರೇಕ್ಷಕರನ್ನು ಭದ್ರಾವತಿಗೆ ಮಾತ್ರವಲ್ಲ ಈ ಚಿತ್ರದಲ್ಲಿ ಬರುವ ಘಟನೆಗಳು ಮೂವತ್ತು ವರ್ಷಗಳ ಹಿಂದೆ ಯಾವ ಯಾವ ಜಾಗಗಳಲ್ಲಿ ನಡೆದುವೋ ಅಲ್ಲಿಗೆಲ್ಲ ಕರೆದೊಯ್ಯುತ್ತೇನೆ ಎಂದರು ನಾರಾಯಣ್.

ಇದುವರೆಗೆ ಬಿಡುಗಡೆಯಾದ ಯಾವ ಚಿತ್ರದಲ್ಲೂ ಕಂಡು ಬರದ ಛಾಯೆ 'ದುಷ್ಟ' ಚಿತ್ರದಲ್ಲಿದೆ ಎಂದು ನಾರಾಯಣ್ ಅವರು ಅತೀವ ಆತ್ಮವಿಶ್ವಾಸದಿಂದ ಹೇಳುತ್ತಾರೆ. 'ನಾನು ಹೀಗೆ ಹೇಳಲು ಕಾರಣವೇನೆಂದರೆ ಚಿತ್ರದಲ್ಲಿರುವ ಸತ್ವ. ಆ ಸತ್ವವನ್ನು ತೆರೆಯ ಮೇಲೆ ತರುತ್ತಿದ್ದೀನಿ. ಈ ಸಿನಿಮಾ ನೋಡುವಾಗ ನಿಮಗೆ ನೈಜ ಬದುಕಿನ ಅನುಭವ ಆಗುತ್ತದೆ. ಎಲ್ಲೂ ಕೃತಕತೆ ಇಲ್ಲ. ನಾನು ಕಣ್ಣಾರೆ ಕಂಡ ಆಘಾತಕಾರಿ ಘಟನೆಗಳನ್ನು ಒಬ್ಬ ನಿರ್ದೇಶಕನಾಗಿ ನಾನೇ ಖುದ್ದಾಗಿ ಹೇಳುತ್ತಾ ಹೋಗುತ್ತೇನೆ. ಡಬ್ಬಿಂಗ್, ರೀಮೇಕ್ ಬಗ್ಗೆ ಚರ್ಚೆ ನಡೆಸುತ್ತಿರುವ ಈ ದಿನಗಳಲ್ಲಿ 'ದುಷ್ಟ' ಚಿತ್ರವು ಪ್ರೇಕ್ಷಕರ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಹಣ ಕೊಟ್ಟು ಟಿಕೆಟ್ ಖರೀದಿಸುವ ಪ್ರೇಕ್ಷಕನಿಗೆ ಖಂಡಿತಾ ನಿರಾಸೆ ಆಗುವುದಿಲ್ಲ' ಎನ್ನುತ್ತಾರೆ ನಾರಾಯಣ್.

'ದುಷ್ಟ' ಸಿನಿಮಾ ನೋಡಿ. ಈ ಸಿನಿಮಾದಲ್ಲಿ ನಟಿಸಿರುವವರ ಪೈಕಿ ಯಾರು ಹೊಸಬರು ಎಂದು ನಿಖರವಾಗಿ ಹೇಳಿದವರಿಗೆ ಬಹುಮಾನ ಕೊಡುತ್ತೇನೆ- ಇದು ನಾರಾಯಣ್ ಒಡ್ಡುವ ಸವಾಲು. ಇದೇನು ಸವಾಲು? 'ದುಷ್ಟ' ಚಿತ್ರದಲ್ಲಿ ನಾಯಕ ಪಂಕಜ್ ಹೊರತುಪಡಿಸಿ ಉಳಿದವರೆಲ್ಲ ಹೊಸಬರೇ ಅಲ್ಲವೇ?

ನಿಜ. ಮುಖ ನೋಡಿದಾಗ ಇವರು ಹೊಸಬರು ಅನ್ನಿಸುತ್ತದೆ. ಇವರ ಅಭಿನಯ ನೋಡಿದಾಗ ಅನುಭವಸ್ಥರು ಅನ್ನಿಸುತ್ತದೆ. ಈ ಅರ್ಥದಲ್ಲಿ ಸವಾಲು ಒಡ್ಡಿದ್ದೇನೆ ಎಂದರು ನಾರಾಯಣ್.
ಇವನ್ನೂ ಓದಿ