ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ವಿಷ್ಣು'ವಾಗಿ ಮೋಡಿಮಾಡಲು ಬರುತ್ತಿದ್ದಾರೆ ಅಭಿಜಿತ್ (Vishnu | Abhijith | Kannada | Thriller Manju)
PR
ಇತ್ತೀಚಿನ ದಿನಗಳಲ್ಲಿ ತೆರೆಮರೆಗೆ ಸರಿದಿರುವ ಹಿರಿಯ ನಟ ಅಭಿಜಿತ್ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ದಿನಗಳ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳಲು ಮುಂದಾಗಿರುವ ಅಭಿಜಿತ್ 'ವಿಷ್ಣು'ವಾಗುತ್ತಿದ್ದಾರೆ. 'ವಿಷ್ಣು'ವಿನ ಮೂಲಕ ಅಭಿಜಿತ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ವಿಷ್ಣು'ವಿಗೆ ಅಭಿಜಿತ್ ಅವರೇ ನಿರ್ದೇಶಕರು. ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯೂ ಅವರದೇ. ಅಭಿಜಿತ್ ಪತ್ನಿ ರೋಹಿಣಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ತಿಂಗಳಲ್ಲೇ ಚಿತ್ರದ ಶೂಟಿಂಗ್ ಆರಂಭಗೊಳ್ಳಲಿದೆ. ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಎಂ.ಎನ್. ಕೃಪಾಕರ್ ಸಂಗೀತ, ಥ್ರಿಲ್ಲರ್ ಮಂಜು ಸಾಹಸ, ಗೋವರ್ಧನ್ ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಆದರ್ಶ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಈಗಾಗಲೇ ಆರಂಭಗೊಂಡಿದೆ.

ರಾಮಚಂದ್ರುಡು ಸಂಭಾಷಣೆ ಬರೆದಿದ್ದು ಅಭಿಜಿತ್ ಜೋತೆಗೆ ಬುಲೆಟ್ ಪ್ರಕಾಶ್, ರವಿಶಂಕರ್, ಗೀತಾ, ಸತ್ಯಪ್ರಕಾಶ್, ಮತ್ತಿತರರು ತಾರಾಬಳಗದಲ್ಲಿದ್ದಾರೆ. ಬಹಳ ದಿನಗಳ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಅಭಿಜಿತ್ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಯಾವ ಮೋಡಿ ಮಾಡುತ್ತಾರೋ ಕಾದು ನೋಡಬೇಕು.
ಇವನ್ನೂ ಓದಿ