ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗುರು ಪ್ರಸಾದ್ ಹೀರೋ ಆಗ್ತಿದ್ದಾರೆ (Guru Prasad | Mata | Eddelu Manjunatha | Directer Special)
PR
'ಮಠ' ಹಾಗೂ 'ಎದ್ದೇಳು ಮಂಜುನಾಥ' ಹಿಟ್ ಚಿತ್ರಗಳ ನಂತರ ಗುರು ಪ್ರಸಾದ್ ಏನು ಮಾಡುತ್ತಿದ್ದಾರೆ? ಅವರ 'ಡೈರೆಕ್ಟರ್ ಸ್ಪೆಶಲ್' ಮುಹೂರ್ತ ಕಂಡ ಮೇಲೆ ಸುದ್ದಿಯೇ ಇಲ್ಲದಂತಾಯ್ತು. ಇದಕ್ಕೆಲ್ಲಾ ಇಷ್ಟರಲ್ಲೇ ಗುರುಪ್ರಸಾದ್ ಉತ್ತರ ಕೊಡಲಿದ್ದಾರೆ.

ಬರುವ ತಿಂಗಳು ಜೂನ್ ಹನ್ನೆರಡಕ್ಕೆ 'ಡೈರೆಕ್ಟರ್ ಸ್ಪೆಷಲ್' ಚಿತ್ರೀಕರಣ ಶುರುವಾಗಲಿದೆ. ಅದರ ಜೊತೆ ಜೊತೆಗೆ 'ಜುಗಲ್‌ ಬಂದಿ' ಚಿತ್ರವೂ ಸೆಟ್ಟೇರಲಿದೆ. ಇವೆಲ್ಲಕ್ಕಿಂತ ವಿಶೇಷವೆಂದರೆ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಗುರುಪ್ರಸಾದ್ ನಾಯಕರಾಗಿ ನಟಿಸಲಿದ್ದಾರೆ.

ಅದರ ಸ್ಕ್ರಿಪ್ಟ್ ವರ್ಕ್ ಇನ್ನೂ ಮುಗಿದಿಲ್ಲವಾದುದರಿಂದ ಆ ಚಿತ್ರ ಸೆಟ್ಟೇರಲು ಎರಡು ತಿಂಗಳಿಗೂ ಹೆಚ್ಚು ಕಾಲಾವಕಾಶ ಬೇಕಾಗಬಹುದು ಎನ್ನುತ್ತಾರೆ ಗುರುಪ್ರಸಾದ್.

ಇತ್ತೀಚೆಗೆ ಬಿಡುಗಡೆಯಾದ 'ಹುಡುಗರು' ಚಿತ್ರಕ್ಕೆ ಸಂಭಾಷಣೆ ಬರೆದವರು ಗುರುಪ್ರಸಾದ್. ಅವರ ಮುಂದಿನ ಚಿತ್ರಗಳಿಗೂ ಅವರದೇ ಸಂಭಾಷಣೆ ಇರುತ್ತದೆ ಎಂದು ಹೇಳಲು ಅವರು ಮರೆಯಲಿಲ್ಲ. ಒಟ್ಟಿನಲ್ಲಿ ಗುರು ಪ್ರಸಾದ್ ಇನ್ಮೇಲೆ ಫುಲ್ ಬ್ಯುಸಿ.
ಇವನ್ನೂ ಓದಿ