ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪೂಜಾಗಾಂಧಿ ಆಸ್ಪತ್ರೆ ಸೇರಲು ನಿಜವಾದ ಕಾರಣ ಏನು? (Pooja Gandhi | Dr. Kiran | Nee Illade | Mungaru Male)
PR
ಕನ್ನಡ ಚಿತ್ರರಂಗದ ಮೋಹಕ ನಟಿ ಪೂಜಾ ಗಾಂಧಿ ಮತ್ತು ಡಾ.ಕಿರಣ್ ನಡುವಿನ ಜಟಾಪಟಿ ಬೀದಿ ರಂಪವಾಗಿದೆ. ಚಿಕ್ಕ ಮಕ್ಕಳ ತರಹ ಇಬ್ಬರೂ ವಾಕ್ ಸಮರ ಮುಂದುವರಿಸಿದ್ದಾರೆ. ಮಾಧ್ಯಮಗಳೆದುರು ಗುರುವಾರ ಎರಡೆರಡು ಬಾರಿ ಹಾಜರಾದ ಪೂಜಾ ಗಾಂಧಿ 'ಕಿರಣ್ ಒಬ್ಬ ಸೈಕಿಕ್. ಅವನಿಗೆ ತಲೆ ಸರಿ ಇಲ್ಲ. ತುಂಬಾ ಸಿಲ್ಲಿಯಾಗಿ ಮಕ್ಕಳ ತರಹ ವರ್ತಿಸುತ್ತಾನೆ. ಒಮ್ಮೆ ಹೇಳಿದ್ದು ಇನ್ನೊಮ್ಮೆ ಹೇಳಲ್ಲ. ಒಂದು ಬಾರಿ ನಾನು ನಿನ್ನ ಅಭಿಮಾನಿ ಎನ್ನುತ್ತಾನೆ. ಮರುಕ್ಷಣವೇ ಇನ್ನೇನೋ ಹೇಳುತ್ತಾನೆ' ಎಂದು ಜರೆದಿದ್ದಾರೆ.

ಆಸ್ಪತ್ರೆ ಸೇರಿದ್ದ ಕಾರಣವೇನು...?
ಇದಕ್ಕೆ ಉತ್ತರ ನೀಡಿರುವ ಡಾ. ಕಿರಣ್ 'ಸೈಕಿಕ್ ನಾನಲ್ಲ. ಅವಳೇ ಸೈಕಿಕ್. ಹಿಂದೊಮ್ಮೆ ತಲೆ ನೋವಿನ ಕಾರಣವೊಡ್ಡಿ ಆಕೆ ಆಸ್ಪತ್ರೆ ಸೇರಿದ್ದರ ನಿಜವಾದ ಕಾರಣವೇನು ಎಂಬುದು ಆ ಆಸ್ಪತ್ರೆಯ ದಾಖಲೆಗಳನ್ನು ಪರೀಶೀಲಿಸಿದರೆ ನಿಮಗೇ ತಿಳಿಯುತ್ತದೆ' ಎಂದಿದ್ದಾರೆ.

ಈ ಮಧ್ಯೆ ಬಾಯಿ ಹಾಕಿರುವ ಪೂಜಾ ತಂದೆ ಪವನ್ ಕುಮಾರ್ ಗಾಂಧಿ 'ಇಷ್ಟು ದಿನ ಕಿರಣ್‌ನ ತಪ್ಪುಗಳನ್ನು ಕ್ಷಮಿಸುತ್ತಾ ಬಂದಿದ್ದೆ. ಆದರೆ ಇನ್ನು ಕ್ಷಮಿಸಲು ಸಾಧ್ಯವಿಲ್ಲ. ಅವನದ್ದು ಅತಿಯಾಯ್ತು' ಎಂದಿದ್ದಾರೆ.

'ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ವೈದ್ಯ ಹಾಗೂ ಪ್ರೊಫೆಸರ್ ಡಾ. ಕಿರಣ್ ಅವರೊಂದಿಗೆ ಯಾವುದೇ ವ್ಯಾವಹಾರಿಕ ಸಂಬಂಧ ನನಗಿಲ್ಲ. ಈ ವರೆಗೂ ನನ್ನ ಮೇಲೆ ಕಿರಣ್ ಮಾಡಿರುವ ಆರೋಪಗಳೆಲ್ಲ ಸುಳ್ಳು' ಎಂದು ಪೂಜಾ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

'ಒಂದು ವರ್ಷದಿಂದ ಡಾ. ಕಿರಣ್‌ಗೂ ನನಗೂ ಯಾವುದೇ ಸಂಪರ್ಕವಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಅವರು ಕೆಟ್ಟದಾಗಿ ಮೆಸೇಜ್‌ಗಳನ್ನು ಮಾಡಿದರು. ಈ ಬಗ್ಗೆ ನಾನು ಗಮನ ಕೊಡದಿದ್ದಾಗ ಜೀವ ಬೆದರಿಕೆ ಹಾಕಿದರು. ಈ ಕಾರಣಕ್ಕೆ ಡಾ. ಕಿರಣ್ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ' ಎಂದರು ಪೂಜಾ ಗಾಂಧಿ.
ಇವನ್ನೂ ಓದಿ